Connect with us

LATEST NEWS

ನನ್ನ ಗಂಡನ ಹತ್ಯೆ ಮಾಡಿದ ಆರೋಪಿಗಳಿಗೆ ಮರಣದಂಡನೆ ಶಿಕ್ಷೆ ನೀಡಬೇಕು -ದಿ. ಪ್ರವೀಣ್ ನೆಟ್ಟಾರು ಪತ್ನಿ ನೂತನ

ಮಂಗಳೂರು ಮೇ 10: ಬಿಜೆಪಿ ಯುವಮುಖಂಡ ಪ್ರವೀಣ್ ನೆಟ್ಟಾರ್ ಹತ್ಯೆಯ ಪ್ರಮುಖ ಆರೋಪಿ ಬಂಧನ ಮುಸ್ತಫಾ ಪೈಚಾರ್ ನನ್ನು ಎನ್ಐಎ ಅಧಿಕಾರಿಗಳು ಬಂಧಿಸಿದ ಹಿನ್ನಲೆ ಪ್ರವೀಣ್ ನೆಟ್ಟಾರ್ ಅವರ ಪತ್ನಿ ಸಂತಸ ವ್ಯಕ್ತಪಡಿಸಿದ್ದಾರೆ.


ಮಾಧ್ಯಮಗಳ ಜೊತೆ ಮಾತನಾಡಿದ ಅವರು ಮುಸ್ತಫಾ ಪೈಚಾರ್ ಕೊಲೆ ಪ್ರಕರಣ ಪ್ರಮುಖ ಆರೋಪಿಯಾಗಿದ್ದು, ಆತನೇ ಗಂಡನ ಹತ್ಯೆಗೆ ಪ್ಲಾನ್ ಗಳನ್ನು ಮಾಡಿದ್ದ, ಇದೀಗ ಎನ್ ಐಎ ಅಧಿಕಾರಿಗಳು ಮುಸ್ತಫಾ ನ ಬಂಧನ ಮಾಡಿರೋದು ನಮಗೆ ಖುಷಿ ತಂದಿದೆ ಎಂದರು. ಅಲ್ಲದೆ ಇನ್ನೂ ತಲೆಮರೆಸಿಕೊಂಡವರನ್ನು ಶೀಘ್ರವಾಗಿ ಬಂಧಿಸಬೇಕು,ಎಲ್ಲರಿಗೂ ಮರಣದಂಡನೆ ಶಿಕ್ಷೆಯನ್ನು ನೀಡಬೇಕು ಎಂದು ಆಗ್ರಹಿಸಿದರು.


ಇನ್ನು ದೇಶದಲ್ಲಿ ಇಂತಹ ಕೊಲೆಗಳು ನಡೆಯಬಾರದು, ಇದೇ ಕೊನೆಯ ಕೊಲೆಯಾಗಬೇಕು. ಇನ್ನು ಎಂದಿಗೂ ಇಂತಹ ಕೃತ್ಯ ಮಾಡದ ರೀತಿಯಲ್ಲಿ ಆರೋಪಿಗಳಿಗೆ ಶಿಕ್ಷೆ ನೀಡಬೇಕು ಎಂದ ಅವರು, ಎನ್ ಐ ಎ ಅಧಿಕಾರಿಗಳು ಈ ಪ್ರಕರಣವನ್ನು ಮುತುವರ್ಜಿಯಿಂದ ತೆಗೆದುಕೊಂಡಿದ್ದಾರೆ. ಅಂದಿನಿಂದ ಇಂದಿನವರೆಗೂ ಹಿಂದೆ ಬಿದ್ದು ಕೆಲಸ ಮಾಡಿದ್ದಾರೆ. ಎನ್ ಐ ಎ ಅಧಿಕಾರಿಗಳಿಗೆ ನಮ್ಮ ಕುಟುಂಬದ ಪರವಾಗಿ ಧನ್ಯವಾದ ಸಲ್ಲಿಸುತ್ತೇವೆ ಎಂದರು.

Share Information
Continue Reading
Advertisement
Click to comment

Leave a Reply

Your email address will not be published. Required fields are marked *