Connect with us

    LATEST NEWS

    ಹಿಂದೂ ಹುಲಿಯನ್ನು ಮುಗಿಸಲು ಪ್ರಯತ್ನಿಸಿದರೆ ಸುಮ್ಮನಿರಲ್ಲ- ಸಂಸದ ಪ್ರತಾಪ್ ಸಿಂಹ

    ಹಿಂದೂ ಹುಲಿಯನ್ನು ಮುಗಿಸಲು ಪ್ರಯತ್ನಿಸಿದರೆ ಸುಮ್ಮನಿರಲ್ಲ- ಸಂಸದ ಪ್ರತಾಪ್ ಸಿಂಹ

    ಬೆಂಗಳೂರು ಎಪ್ರಿಲ್ 18: ಕೌಶಲ್ಯಾಭಿವೃದ್ಧಿ ಸಚಿವ ಅನಂತ್ ಕುಮಾರ್ ಹೆಗ್ಡೆ ಅವರ ಕಾರು ಅಪಘಾತ ಪ್ರಕರಣ ಈಗ ರಾಜಕೀಯ ತಿರುವು ಪಡೆದುಕೊಂಡಿದೆ. ಪ್ರಕರಣದ ಹಿನ್ನಲೆಯಲ್ಲಿ ಸಂಸದ ಪ್ರತಾಪ್ ಸಿಂಹ ಮುಖ್ಯಮಂತ್ರಿಯವರಿಗೆ ಸವಾಲೆಸೆದಿದ್ದಾರೆ.

    ನಿವು ನಮ್ಮ ಹಿಂದೂ ಹುಲಿಯನ್ನು ಮುಗಿಸಲು ಪ್ರಯತ್ನಿಸಿದರೆ, ನಾವು ಸುಮ್ಮನೆ ಇರೋದಿಲ್ಲ ಎಂದು ಟ್ವಿಟ್ ನಲ್ಲಿ ಘಟನೆಯನ್ನು ಖಂಡಿಸಿ ಸಂಸದ ಪ್ರತಾಪ್ ಸಿಂಹ್ ಟ್ವಿಟ್ ಮಾಡಿದ್ದಾರೆ. ಅಲ್ಲದೆ ಸಿದ್ದರಾಮಯ್ಯನವರೇ ಬೀದಿಗೆ ಇಳಿದು ಹೋರಾಟ ಮಾಡುತ್ತೇವೆ. ಆ ಹೋರಾಟದ ವೇಳೆ ನಿಮ್ಮನ್ನ ಯಾರು ಕಾಪಾಡುವುದಿಲ್ಲ ಅಂತ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಕೇಂದ್ರ ಸಚಿವ ಅನಂತ ಕುಮಾರ್ ಹೆಗ್ಡೆ ಅಪಘಾತ ಪ್ರಕರಣ ಇದೀಗ ರಾಜಕೀಯ ತಿರುವು ಪಡೆದುಕೊಂಡಿದ್ದು, ಇದು ಸದ್ಯ ಕರ್ನಾಟಕ ಚುನಾವಣೆ ಮೇಲೆ ಯಾವ ರೀತಿ ಪರಿಣಾಮ ಬೀರಲಿದೆ ಎಂದು ಕಾದು ನೋಡಬೇಕಾಗಿದೆ.

    Share Information
    Advertisement
    Click to comment

    You must be logged in to post a comment Login

    Leave a Reply