BANTWAL
ಪ್ರಧಾನಿ ನರೇಂದ್ರ ಮೋದಿಗೆ ಮತಿ ಭ್ರಮಣೆ – ನಟ ಪ್ರಕಾಶ್ ರೈ
ಪ್ರಧಾನಿ ನರೇಂದ್ರ ಮೋದಿಗೆ ಮತಿ ಭ್ರಮಣೆ – ನಟ ಪ್ರಕಾಶ್ ರೈ
ಮಂಗಳೂರು ಏಪ್ರಿಲ್ 28:ದೇಶದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮತಿ ಭ್ರಮಣೆಯಾಗಿದೆ ಎಂದು ಹೇಳುವ ಮೂಲಕ ನಟ ಪ್ರಕಾಶ್ ರೈ ವಿವಾದ ಹುಟ್ಟುಹಾಕಿದ್ದಾರೆ.
ಇಂದು ದಕ್ಷಿಣಕನ್ನಡ ಜಿಲ್ಲೆಯ ಬಂಟ್ವಾಳದ ಬಿಸಿ ರೋಡ್ ನಲ್ಲಿ ಆಯೋಜಿಸಲಾಗಿದ್ದ ಸ್ವಾಭಿಮಾನಿ ಸಮಾವೇಶದಲ್ಲಿ ಮಾತನಾಡಿದ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮತ ಭ್ರಮಣೆಯಾಗಿದ್ದು, ಟ್ವಿಟ್ ಮಾಡಿ ನಾನು ಕನ್ನಡಿಗ ಎನ್ನುತ್ತಾರೆ , ಗುಜರಾತ್ ನಲ್ಲಿ ನಾನು ಗುಜರಾತಿ ಎನ್ನುತ್ತಾರೆ ಇದರಲ್ಲೆ ಗೊತ್ತಾಗುತ್ತೆ ಮೋದಿ ಮಹಾನ್ ಸುಳ್ಳುಗಾರ ಎಂದು ಕಿಡಿಕಾರಿದರು.
ಮೋದಿಯವರು ಕನ್ನಡ ಕಲಿಯುತ್ತೇನೆ ಎಂಬ ಟ್ವೀಟ್ ಗೆ ಪ್ರತಿಕ್ರಿಯಿಸಿದ ಪ್ರಕಾಶ್ ರೈ, ನಮ್ಮ ಕನ್ನಡ ಶಾಲೆಗಳಲ್ಲಿ ನಿಮಗೆ ಅವಕಾಶ ಇಲ್ಲ ವಯಸ್ಕರ ಶಿಕ್ಷಣ ಕೇಂದ್ರದಲ್ಲಿ ಬಂದು ಕನ್ನಡ ಕಲಿಯಬಹುದು ಎಂದು ವ್ಯಂಗ್ಯ ವಾಡಿದರು. ಅಲ್ಲದೇ ನೀವು 2019ರಲ್ಲಿ ನೀವು ನಿರುದ್ಯೋಗಿಯಾಗುತ್ತಿರಿ ಎಂದು ಹೇಳಿದರು.
ಬಿಜೆಪಿ ಪಕ್ಷಕ್ಕೆ ಸಿದ್ಧಾಂತವೆಂಬುದೇ ಇಲ್ಲ. ಆ ಪಕ್ಷ ಕೇವಲ ಬೆದರುಗೊಂಬೆ ತರವಿರುವ ಪಕ್ಷವಾಗಿದೆ ಎಂದರು. ಯಡಿಯೂರಪ್ಪ ಅಮಿತ್ ಶಾ ಬಂದಾಗ ಅವರ ಕಾಲು ಹಿಡಿಯುತ್ತಾರೆ. ಯಡಿಯೂರಪ್ಪನವರೇ ನಿಮ್ಮ ವಯಸ್ಸೆಷ್ಟು , ಅಮಿತ್ ಶಾ ವಯಸ್ಸೆಷ್ಟು. ಅಮಿತ್ ಶಾ ದೇಶಕ್ಕೆ ಕೊಟ್ಟ ಕೊಡುಗೆಯಾದರೂ ಏನು ಎಂದು ಅವರು ಇದೇ ಸಂದರ್ಭದಲ್ಲಿ ಯಡಿಯೂರಪ್ಪ ಹಾಗೂ ಅಮಿತ್ ಶಾ ವಿರುದ್ಧ ವಾಗ್ದಾಳಿ ನಡೆಸಿದರು.
You must be logged in to post a comment Login