Connect with us

BELTHANGADI

ವಿದ್ಯುತ್ ಶಾಕ್ ಗೆ ಸಹಾಯಕ ಪವರ್ ಮ್ಯಾನ್ ಬ*ಲಿ

ಬೆಳ್ತಂಗಡಿ ಮೇ 30: ವಿದ್ಯುತ್ ಪರಿವರ್ತಕದಲ್ಲಿ ಕೆಲಸ ನಿರ್ವಹಿಸುತ್ತಿದ್ದ ವೇಳೆ ವಿದ್ಯುತ್ ಆಘಾತದಿಂದ ಸಹಾಯಕ ಪವರ್ ಮ್ಯಾನ್ ಶುಕ್ರವಾರ ಮೃತಪಟ್ಟಿದ್ದಾರೆ.


ಬೆಳ್ತಂಗಡಿ ಮೆಸ್ಕಾಂ ಉಪ ವಿಭಾಗದ ಕುವೆಟ್ಟು ಅಮರಜಾಲು ಬಳಿ ಪರಿವರ್ತಕದ ಪ್ಯೂಸ್ ಹಾಕಲು ಹೋಗಿದ್ದ ಓಡಿಲ್ನಾಳ ನಿವಾಸಿ ವಿಜೇಶ್ ಕುಮಾರ್ ಕೆ. (35) ಮೃತಪಟ್ಟವರು.
ಅವಿವಾಹಿತರಾಗಿದ್ದ ಅವರು ಎಂಟು ವರ್ಷಗಳಿಂದ ಇಲಾಖೆಯಲ್ಲಿ ಸಹಾಯಕ ಪವರ್ ಮ್ಯಾನ್ ಆಗಿದ್ದರು. ಕೆಲಸ ನಿರ್ವಹಿಸುವುದಕ್ಕಾಗಿ ಜಿಒಎಸ್‌ನಲ್ಲಿ ವಿದ್ಯುತ್ ಕಡಿತಗೊಳಿಸಿ ಅವರು ಪರಿವರ್ತಕದ ಮೇಲೆ ಕೆಲಸ ನಿರ್ವಹಿಸುತ್ತಿದ್ದರು. ಈ ವೇಳೆ ವಿದ್ಯುತ್ ಆಘಾತಗೊಂಡು ಸ್ಥಳದಲ್ಲೇ ಮೃತಪಟ್ಟರು. ಜಿಒಎಸ್‌ನಲ್ಲಿ ಸರಿಯಾಗಿ ವಿದ್ಯುತ್ ಕಡಿತಗೊಳ್ಳದೆ ಇರುವುದೇ ಘಟನೆಗೆ ಕಾರಣ ಎಂದು ಹೇಳಲಾಗಿದೆ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *