DAKSHINA KANNADA
ಕುಕ್ಕೆಯಲ್ಲಿ ಸಾಮಾನ್ಯನಾದ ಪವರ್ ಮಿನಿಸ್ಟರ್
ಕುಕ್ಕೆಯಲ್ಲಿ ಸಾಮಾನ್ಯನಾದ ಪವರ್ ಮಿನಿಸ್ಟರ್
ಸುಳ್ಯ,ಸೆಪ್ಟಂಬರ್ 24: ತನ್ನ ಬಳಿ ಅಧಿಕಾರ, ಹಣವಿದ್ದರೆ ಆತ ಎಲ್ಲರಿಂದಲೂ ತನ್ನನ್ನು ಭಿನ್ನವಾಗಿ ಕಾಣಲು ಬಯಸೋದು ಸಾಮಾನ್ಯ. ಅದರಲ್ಲೂ ಜನಪ್ರತಿನಿಧಿಗಳಂತೂ ಇದನ್ನು ಎಲ್ಲರಿಂದಲೂ ನಿರೀಕ್ಷಿಸುವಂತರೇ ಆಗಿದ್ದಾರೆ. ಆದರೆ ರಾಜ್ಯ ಇಂಥನ ಸಚಿವ ಡಿ.ಕೆ. ಶಿವಕುಮಾರ್ ಮಾತ್ರ ಇಂದು ಈ ವ್ಯಕ್ತಿಗಳಿಗಿಂತ ಕೊಂಚ ಭಿನ್ನವಾಗಿ ಕಾಣಿಸಿಕೊಂಡಿದ್ದಾರೆ. ತನ್ನ ಕುಟುಂಬ ಸಮೇತ ದಕ್ಷಿಣ ಭಾರತದ ಹೆಸರಾಂತ ನಾಗಕ್ಷೇತ್ರವಾದ ಕುಕ್ಕೆ ಸುಬ್ರಮಣ್ಯಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಅವರ ಈ ಭಿನ್ನತೆ ಗೋಚರಕ್ಕೆ ಬಂದಿದೆ.
ನಾಗಪ್ರತಿಷ್ಟೆಗಾಗಿ ಡಿ.ಕೆ.ಶಿ ಸಾಮಾನ್ಯ ಭಕ್ತರಂತೆ ಸರತಿ ಸಾಲಿನಲ್ಲಿ ನಿಂತು ಪೂಜೆಯನ್ನು ನೆರವೇರಿಸಿದರು. ಅಲ್ಲದೆ ದೇವಸ್ಥಾನದ ಒಳಗೆ ತಾನೊಬ್ಬ ಸಚಿವ ಎನ್ನುವ ಅಹಂ ಅನ್ನು ಬಿಟ್ಟು ಎಲ್ಲಾ ಸಾಮಾನ್ಯ ಜನರ ಜೊತೆಗೆ ಬೆರೆತ್ತಿದ್ದುದು ಎಲ್ಲರ ಮೆಚ್ಚುಗೆಯೂ ಪಾತ್ರವಾಗಿತ್ತು.
ತನ್ನ ಅಧಿಕಾರ ಬಳಿಸಿ ಸರತಿ ಸಾಲಿನಲ್ಲಿ ನಿಲ್ಲದೆ ಪೂಜೆ ಮಾಡಿಸಿಕೊಳ್ಳುವ ಅಧಿಕಾರ ಡಿ.ಕೆ. ಶಿವಕುಮಾರ್ ಬಳಿ ಇದ್ದರೂ, ಕುಕ್ಕೆಯಲ್ಲಿ ಮಾತ್ರ ಡಿ.ಕೆ.ಶಿ ಸಾಮಾನ್ಯ ಭಕ್ತನಂತೆ ವರ್ತಿಸಿದ್ದು ಎಲ್ಲರ ಪ್ರಶಂಸೆಗೂ ಪಾತ್ರವಾಗಿತ್ತು.
You must be logged in to post a comment Login