DAKSHINA KANNADA
ಕುಕ್ಕೆಯಲ್ಲಿ ಸಾಮಾನ್ಯನಾದ ಪವರ್ ಮಿನಿಸ್ಟರ್
![](https://i0.wp.com/themangaloremirror.in/wp-content/uploads/2024/04/For-Advertisement-Please-Contact.jpg?fit=728%2C90&ssl=1)
ಕುಕ್ಕೆಯಲ್ಲಿ ಸಾಮಾನ್ಯನಾದ ಪವರ್ ಮಿನಿಸ್ಟರ್
ಸುಳ್ಯ,ಸೆಪ್ಟಂಬರ್ 24: ತನ್ನ ಬಳಿ ಅಧಿಕಾರ, ಹಣವಿದ್ದರೆ ಆತ ಎಲ್ಲರಿಂದಲೂ ತನ್ನನ್ನು ಭಿನ್ನವಾಗಿ ಕಾಣಲು ಬಯಸೋದು ಸಾಮಾನ್ಯ. ಅದರಲ್ಲೂ ಜನಪ್ರತಿನಿಧಿಗಳಂತೂ ಇದನ್ನು ಎಲ್ಲರಿಂದಲೂ ನಿರೀಕ್ಷಿಸುವಂತರೇ ಆಗಿದ್ದಾರೆ. ಆದರೆ ರಾಜ್ಯ ಇಂಥನ ಸಚಿವ ಡಿ.ಕೆ. ಶಿವಕುಮಾರ್ ಮಾತ್ರ ಇಂದು ಈ ವ್ಯಕ್ತಿಗಳಿಗಿಂತ ಕೊಂಚ ಭಿನ್ನವಾಗಿ ಕಾಣಿಸಿಕೊಂಡಿದ್ದಾರೆ. ತನ್ನ ಕುಟುಂಬ ಸಮೇತ ದಕ್ಷಿಣ ಭಾರತದ ಹೆಸರಾಂತ ನಾಗಕ್ಷೇತ್ರವಾದ ಕುಕ್ಕೆ ಸುಬ್ರಮಣ್ಯಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಅವರ ಈ ಭಿನ್ನತೆ ಗೋಚರಕ್ಕೆ ಬಂದಿದೆ.
ನಾಗಪ್ರತಿಷ್ಟೆಗಾಗಿ ಡಿ.ಕೆ.ಶಿ ಸಾಮಾನ್ಯ ಭಕ್ತರಂತೆ ಸರತಿ ಸಾಲಿನಲ್ಲಿ ನಿಂತು ಪೂಜೆಯನ್ನು ನೆರವೇರಿಸಿದರು. ಅಲ್ಲದೆ ದೇವಸ್ಥಾನದ ಒಳಗೆ ತಾನೊಬ್ಬ ಸಚಿವ ಎನ್ನುವ ಅಹಂ ಅನ್ನು ಬಿಟ್ಟು ಎಲ್ಲಾ ಸಾಮಾನ್ಯ ಜನರ ಜೊತೆಗೆ ಬೆರೆತ್ತಿದ್ದುದು ಎಲ್ಲರ ಮೆಚ್ಚುಗೆಯೂ ಪಾತ್ರವಾಗಿತ್ತು.
![](https://i0.wp.com/themangaloremirror.in/wp-content/uploads/2024/06/IMG-20240626-WA0023.jpg?fit=1280%2C670&ssl=1)
ತನ್ನ ಅಧಿಕಾರ ಬಳಿಸಿ ಸರತಿ ಸಾಲಿನಲ್ಲಿ ನಿಲ್ಲದೆ ಪೂಜೆ ಮಾಡಿಸಿಕೊಳ್ಳುವ ಅಧಿಕಾರ ಡಿ.ಕೆ. ಶಿವಕುಮಾರ್ ಬಳಿ ಇದ್ದರೂ, ಕುಕ್ಕೆಯಲ್ಲಿ ಮಾತ್ರ ಡಿ.ಕೆ.ಶಿ ಸಾಮಾನ್ಯ ಭಕ್ತನಂತೆ ವರ್ತಿಸಿದ್ದು ಎಲ್ಲರ ಪ್ರಶಂಸೆಗೂ ಪಾತ್ರವಾಗಿತ್ತು.
You must be logged in to post a comment Login