Connect with us

DAKSHINA KANNADA

ಮಧ್ಯರಾತ್ರಿ ವೇಳೆ ಹಿಂದೂ ಮುಖಂಡರ ಮನೆಯಲ್ಲಿ ಪೊಲೀಸ್ ಪರಿಶೀಲನೆ – ಪೊಲೀಸ್ ಠಾಣೆ ಎದುರು ಹಾಜರಾದವರ ವಿರುದ್ದ ಎಫ್ಐಆರ್

ಪುತ್ತೂರು ಜೂನ್ 02: ಮಧ್ಯರಾತ್ರಿ ವೇಳೆ ಹಿಂದೂ ಸಂಘಟನೆಗಳ ಮುಖಂಡರ ಮನೆಗೆ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸುತ್ತಿದ್ದಾರೆ ಎಂದು ಆರೋಪಿಸಿ ಹಿಂದೂ ಸಂಘಟನೆಗಳ ಪ್ರಮುಖರು ಕಡಬ ಪೊಲೀಸ್ ಠಾಣೆ ಎದುರು ಹಾಜರಾಗಿದ್ದಾರೆ. ಪೊಲೀಸರ ಈ ನಡೆ ವಿರೋಧಿಸಿ ಠಾಣೆ ಎದುರು ಹಾಜರಾಗಿದ್ದಕ್ಕೆ ಎಫ್​ಐಆರ್​ ದಾಖಲಿಸಲಾಗಿದೆ. ಯಾವುದೇ ಪೂರ್ವಾನುಮತಿ ಪಡೆಯದೇ ಅಕ್ರಮವಾಗಿ ಗುಂಪು ಕಟ್ಟಿಕೊಂಡು ಕಡಬ ಠಾಣೆಯ ಮುಂಭಾಗದಲ್ಲಿ ಕಾನೂನು ಬಾಹಿರವಾಗಿ ಪ್ರತಿಭಟನೆ ನಡೆಸಿರುತ್ತಾರೆ ಅಂತ ದೂರಿನಲ್ಲಿ ಉಲ್ಲೇಖಿಸಲಾಗಿದೆ.

 

ಕಡಬ ಠಾಣಾ ವ್ಯಾಪ್ತಿಯ ನಿವಾಸಿಗಳಾದ 1)ಪ್ರಮೋದ್ ರೈ, ನಂದುಗುರಿ, 2) ತಿಲಕ್ , ನಂದುಗುರಿ, 3) ಮೋಹನ, ಕೆರೆಕೋಡಿ, 4)ಚಂದ್ರಶೇಖರ, ನೂಜಿಬಾಳ್ತಿಲ, 5)ಮಹೇಶ್ ಕುಟ್ರುಪ್ಪಾಡಿ. 6)ಡೀಕಯ್ಯ ನೂಜಿಬಾಳ್ತಿಲ, 7) ಸುಜಿತ್ ಕುಟ್ರುಪ್ಪಾಡಿ., 8)ಶರತ್ ನಂದುಗುರಿ, 9)ಶ್ರೇಯತ್, ನಂದುಗುರಿ, 10)ಉಮೇಶ್, ನೂಜಿಬಾಳ್ತಿಲ, 11) ರಾದಾಕೃಷ್ಣ, ಕೆ. 12) ಜಯಂತ್, ಮತ್ತು ಇತರ ಮೂವರ ವಿರುದ್ದ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಈ ವೇಳೆ ಮಾತನಾಡಿದ ಹಿಂದೂ ಸಂಘಟನೆ ಮುಖಂಡರು ಪೊಲೀಸರು ನಮ್ಮನ್ನು ಹುಡುಕಿ ಮನೆಗೆ ಬರೋದು ಬೇಡ, ನಾವೇ ಪೋಲೀಸ್ ಠಾಣೆಗೆ ಬರುತ್ತೇವೆ. ಪೊಲೀಸರು ತಡರಾತ್ರಿ ಮನೆಗೆ ಬಂದು ಬಾಗಿಲು ಬಡಿಯುತ್ತಾರೆ. ಇದರಿಂದ ಸಹಜವಾಗಿಯೇ ಮನೆ ಮಂದಿ ಹೆದರುತ್ತಿದ್ದಾರೆ. ನಾವೇನೂ ರೌಡಿಗಳಲ್ಲ, ನಮ್ಮ ಮೇಲೆ ಈ ರೀತಿಯ ವರ್ತನೆ ಸಹಿಸುವುದಿಲ್ಲ ಎಂದ ಅವರು ಪೋಲೀಸರು ಮನೆಗೆ ಬರೋದು ಬೇಡ, ನಾವೇ ಠಾಣೆಗೆ ಬರುತ್ತೇವೆ. ಕೆಲವೊಮ್ಮೆ ಅಜ್ಞಾತ ಸ್ಥಳಗಳಿಗೂ ಪೋಲೀಸರು ಕರೆಯುತ್ತಾರೆ. ಯಾವ ದೈರ್ಯದಲ್ಲಿ ನಾವು ರಾತ್ರಿ ಆ ಕಡೆಗೆ ಹೋಗೋದು, ರಾತ್ರಿ ವೇಳೆ ಮನೆಗಳಿಗೆ ದಿಢೀರ್​ ಭೇಟಿ ನೀಡಿ ಅಪರಾಧಿಗಳಂತೆ ಬಿಂಬಿಸಿದ್ದಾರೆ. ಇದರಿಂದ ನಮ್ಮ ಕುಟುಂಬಸ್ಥರಲ್ಲಿ ಆತಂಕದ ವಾತಾವರಣ ಸೃಷ್ಟಿಯಾಗಿದೆ. ಹೀಗೆ ಮುಂದುವರಿದರೆ ಮುಂದಿನ ದಿನಗಳಲ್ಲಿ ಹೋರಾಟ ಅನಿವಾರ್ಯ ಎಂದು ಎಚ್ಚರಿಕೆ ನೀಡಿದ್ದಾರೆ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *