Connect with us

UDUPI

ಕಾಲೇಜು ವಿದ್ಯಾರ್ಥಿಗಳಿಂದ ವೃದ್ಧನ ರಕ್ಷಣೆ

ಉಡುಪಿ, ಸೆಪ್ಟೆಂಬರ್ 03 : ಕಾಲೇಜು ವಿದ್ಯಾರ್ಥಿಗಳು ಆತ್ಮ ಹತ್ಯೆಗೆ ಯತ್ನಿಸುತ್ತಿದ್ದ ವೃದ್ದನೋರ್ವನನ್ನು ರಕ್ಷಣೆ ಮಾಡಿದ್ದಾರೆ. ಉಡುಪಿ ಜಿಲ್ಲೆಯ ಮಣಿಪಾಲದಲ್ಲಿ ಈ ಘಟನೆ ಸಂಭವಿಸಿದೆ. ಸುಂದರ ಎಂಬ 65 ವರ್ಷದ ವೃದ್ಧನೇ ವಿದ್ಯಾರ್ಥಿಗಳಿಂದ ರಕ್ಷಿಸಲ್ಪಟ್ಟವರು.

ಘಟನೆಯ ವಿವರ: 65 ವರ್ಷದ ವೃದ್ಧ ಸುಂದರ ಪೂಜಾರಿ ಬದುಕಲು ನೆಲೆಯಿಲ್ಲದೆ ತೀವೃವಾಗಿ ಮನನೊಂದಿದ್ದರು.ಈ ಹಿನ್ನೆಲೆಯಲ್ಲಿ  ಆತ್ಮಹತ್ಯೆಗೆ ಮುಂದಾಗಿದ್ದರು. ಮಣಿಪಾಲ ನೇತಾಜಿ ನಗರ ಅಕೇಶಿಯಾ ಕಾಡಿಗೆ ತೆರಳಿ ಸುಂದರ ಪೂಜಾರಿ ಉಟ್ಟ ಲುಂಗಿಯ ಮೂಲಕ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಈ ಸಂದರ್ಭದಲ್ಲಿ ಅಲ್ಲೇ ಸನಿಹದಲ್ಲಿ ಕಾಲೇಜು ಮುಗಿಸಿ ಮನೆ ಕಡೆಗೆ ತೆರಳುತ್ತಿದ್ದ ವಿದ್ಯಾರ್ಥಿಗಳು ಇದನ್ನು ಗಮನಿಸಿದ್ದಾರೆ. ದುರ್ಘಟನೆಯ ಗಂಭೀರತೆ ಅರಿತ ವಿದ್ಯಾರ್ಥಿಗಳು ಸ್ಥಳಕ್ಕೆ ಧಾವಿಸಿ ಸುಂದರ ಪೂಜಾರಿಯನ್ನು ರಕ್ಷಿಸಿದ್ದಾರೆ. ಆ್ಯಂಬುಲೆನ್ಸ್ ತರಿಸಿ ಉಡುಪಿ ಸರ್ಕಾರಿ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾರೆ. ವಿದ್ಯಾರ್ಥಿಗಳ ಸಮಯ ಪ್ರಜ್ಞೆ ಹಾಗೂ ಮಾನವೀಯತೆ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ.

Share Information
Advertisement
Click to comment

You must be logged in to post a comment Login

Leave a Reply