LATEST NEWS
ರಾಮಮಂದಿರ ನಿರ್ಮಾಣದಲ್ಲಿ ತಮಿಳು ಜನತೆಯ ಬೆಂಬಲ ಅಗತ್ಯ – ಪೇಜಾವರ ಶ್ರೀ ವಿಶ್ವಪ್ರಸನ್ನತೀರ್ಥ
![](https://i0.wp.com/themangaloremirror.in/wp-content/uploads/2024/04/For-Advertisement-Please-Contact.jpg?fit=728%2C90&ssl=1)
ಚೆನ್ನೈ : ತಮಿಳುನಾಡು ಪ್ರವಾಸದಲ್ಲಿರುವ ಅಯೋಧ್ಯೆ ಶ್ರೀ ರಾಮ ಮಂದಿರ ತೀರ್ಥ ಕ್ಷೇತ್ರ ಟ್ರಸ್ಟ್ ನ ವಿಶ್ವಸ್ಥರೂ ಆಗಿರುವ ಪೇಜಾವರ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಸೋಮವಾರ ತಮಿಳುನಾಡು ರಾಜ್ಯಪಾಲ ಶ್ರೀ ಬನ್ವಾರಿಲಾಲ್ ಪುರೋಹಿತ್ ಅವರನ್ನು ಭೇಟಿ ಮಾಡಿದರು .
ಶ್ರೀಗಳನ್ನು ಗೌರವದಿಂದ ಬರಮಾಡಿಕೊಂಡ ರಾಜ್ಯಪಾಲರು ತರುಣ ಪ್ರಾಯದಲ್ಲಿ ಮಹತ್ವದ ಜವಾಬ್ದಾರಿಯನ್ನು ನಿರ್ವಹಿಸುತ್ತಿರುವುದಕ್ಕೆ ಅತೀವ ಸಂತಸ ವ್ಯಕ್ತಪಡಿಸಿ ,ಶ್ರೀಗಳ ಆಗಮನದಿಂದ ರಾಜಭವನ ಪಾವಿತ್ರ್ಯ ವೃದ್ಧಿಸಿತು ಎಂದರು . ಉಭಯ ಕುಶಲೋಪರಿ ನಡೆಸಿದ ಬಳಿಕ ಅಯೋಧ್ಯೆ ರಾಮಮಂದಿರ ಕಾರ್ಯಗಳ ಕುರಿತಾಗಿ ಸಮಾಲೋಚನೆ ನಡೆಸಿದರು .
![](https://i0.wp.com/themangaloremirror.in/wp-content/uploads/2024/06/IMG-20240626-WA0023.jpg?fit=1280%2C670&ssl=1)
ಶ್ರೀಗಳು ಮಂದಿರ ನಿರ್ಮಾಣದ ಮಹತರ್ಯಕ್ಕೆ ಸಮಸ್ತ ತಮಿಳು ಜನತೆಯ ಸಹಭಾಗಿತ್ವದ ಬೆಂಬಲ ಸಹಕಾರದ ಆಶಯವುಳ್ಳ ಪತ್ರವನ್ನು ರಾಜ್ಯಪಾಲರಿಗೆ ನೀಡಿ ಅವರ ಸಹಕಾರವನ್ನೂ ಅಪೇಕ್ಷಿಸಿದರು ಅಲ್ಲದೆ ರಾಜ್ಯಪಾಲರನ್ನು ಉಡುಪಿಗೂ ಆಹ್ವಾನಿಸಿದರು. ರಾಜ್ಯಪಾಲರು ಶ್ರೀಗಳವರನ್ನು ಸತ್ಕರಿಸಿ ಅಭಿವಂದಿಸಿದರು .
ರಾಜ್ಯಪಾಲರಿಗೆ ಶ್ರೀಗಳು ಶಾಲು ಹೊದೆಸಿ ಉಡುಪಿ ಕೃಷ್ಣನ ವಿಗ್ರಹವುಳ್ಳ ಸ್ಮರಣಿಕೆ ನೀಡಿ ಗೌರವಿಸಿದರು . ವಿಶ್ವಹಿಂದು ಪರಿಷತ್ ರಾಜ್ಯಾಧ್ಯಕ್ಷ ಸು ಶ್ರೀನಿವಾಸನ್ ಶ್ರೀಗಳ ಆಪ್ತ ಕಾರ್ಯದರ್ಶಿಗಳಾದ ವಿಷ್ಣುಮೂರ್ತಿ ಆಚಾರ್ಯ , ಕೃಷ್ಣ ಭಟ್ , ವಾಸುದೇವ ಭಟ್ ಪೆರಂಪಳ್ಳಿ ಉಪಸ್ಥಿತರಿದ್ದರು .
You must be logged in to post a comment Login