Connect with us

LATEST NEWS

ಮಂಗಳೂರಿನಲ್ಲಿ ರಸ್ತೆಗುಂಡಿಗಳ ವಿರುದ್ದ PATHOLESEAZAADI…ಅಭಿಯಾನ..

ಮಂಗಳೂರು ಅಗಸ್ಟ್ 11: ಇತ್ತೀಚೆಗೆ ರಸ್ತೆಗುಂಡಿಗೆ ಬಲಿಯಾದ ತನ್ನ ಸ್ನೇಹಿತನ ಸಾವಿಗೆ ನ್ಯಾಯ ಕೊಡಿಸಲು ವಿಧ್ಯಾರ್ಥಿಗಳು ಮುಂದಾಗಿದ್ದು, ಮಂಗಳೂರಿನಲ್ಲಿರುವ ರಸ್ತೆಗುಂಡಿಗಳ ವಿರುದ್ದ ಇದೀಗ patholeseazaadi ಅಭಿಯಾನ ಆರಂಭವಾಗಿದೆ.


ಅತೀಶ್ ಎಂಬ ಇಂಜಿನಿಯರಿಂಗ ವಿಧ್ಯಾರ್ಥಿ ನಂತೂರಿನಿಂದ ಬಿಕರ್ನಕಟ್ಟೆಯತ್ತ ತೆರಳುತ್ತಿದ್ದಾಗ ಹೆದ್ದಾರಿ ಗುಂಡಿಯನ್ನು ತಪ್ಪಿಸಲು ಹೋಗಿ ಡಿವೈಡರ್ ಗೆ ಡಿಕ್ಕಿ ಹೊಡೆದು ಸಾವನಪ್ಪಿದ್ದ. ಇಂಜಿನಿಯರಿಂಗ್ ನ ಅಂತಿಮ ವರ್ಷದ ಪರೀಕ್ಷೆ ಬರೆದು ಫಲಿತಾಂಶಕ್ಕಾಗಿ ಕಾಯುತ್ತಿದ್ದ ಸ್ನೇಹಿತನ ಕಳೆದಕೊಂಡ ವಿಧ್ಯಾರ್ಥಿಗಳು ಇದೀಗ ಅಧಿಕಾರಿಗಳ ವಿರುದ್ದ ಸಾಮಾಜಿಕ ಜಾಲತಾಣದಲ್ಲಿ ಅಭಿಯಾನ ಆರಂಭಿಸಿದ್ದಾರೆ.

ಇಂದು ಲತೀಶ್ ಸ್ನೇಹಿತ ಲಖಿತ್ ರೈ ಒಬ್ಬಂಟಿಯಾಗಿ ಮಂಗಳೂರು ಮಹಾನಗರ ಪಾಲಿಕೆ ಎದುರು ಭಿತ್ತಿಪತ್ರ ಹಿಡಿದು ಪ್ರತಿಭಟನೆ ನಡೆಸಿ ಗಮನ ಸೆಳೆದಿದ್ದಾನೆ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *