Connect with us

    DAKSHINA KANNADA

    ಕಾಸರಗೋಡು – ಮಂಗಳೂರು ಸಂಚಾರಕ್ಕೆ ಡೈಲಿ ಪಾಸ್ ಸೌಲಭ್ಯ

    ಕಾಸರಗೋಡು – ಮಂಗಳೂರು ಸಂಚಾರಕ್ಕೆ ಡೈಲಿ ಪಾಸ್ ಸೌಲಭ್ಯ

    ಮಂಗಳೂರು, ಜೂನ್ 3, ಅಂತಾರಾಜ್ಯ ಸಂಚಾರ ಕಡಿತಗೊಂಡು ಕಾಸರಗೋಡು – ಮಂಗಳೂರು ಸಂಚರಿಸುವುದು ಕಷ್ಟವಾಗಿರುವಾಗಲೇ ಕಾಸರಗೋಡು ಜಿಲ್ಲಾಧಿಕಾರಿ ಡೈಲಿ ಬೇಸಿಸ್ ಪಾಸ್ ಸೌಲಭ್ಯದ ವ್ಯವಸ್ಥೆ ಮಾಡಿದ್ದಾರೆ.

    ದಕ್ಷಿಣ ಕನ್ನಡಕ್ಕೆ ಹೋಗುವವರು ಮತ್ತು ದಕ್ಷಿಣ ಕನ್ನಡದಿಂದ ಕಾಸರಗೋಡಿಗೆ ತೆರಳುವವರು ಈ ಪಾಸ್ ಗಳನ್ನು ಕೇರಳದ ಜಾಗೃತಾ ಪೋರ್ಟಲ್ ಮೂಲಕ ನೋಂದಾಯಿಸಿ ಪಡೆಯಬಹುದು ಎಂದು ಸೂಚಿಸಿದ್ದಾರೆ.

    ಇ- ಪಾಸ್ ಗಳನ್ನು ಪಡೆಯಲು ಇರುವ ವಿವಿಧ ಹಂತಗಳನ್ನು ಈ ರೀತಿ ಕೊಡಲಾಗಿದೆ.

    1. ಅಂತಾರಾಜ್ಯ ಪ್ರವೇಶ ಬಯಸುವ ವ್ಯಕ್ತಿಗಳು ಕೋವಿಡ್-19 ಜಾಗೃತಾ ಪೋರ್ಟಲ್ ನಲ್ಲಿ EMERGENCY Pass ಗಾಗಿ ನೋಂದಣಿ ನಡೆಸಬೇಕು. ಮತ್ತು ಅದಕ್ಕೆ INTERSTATE TRAVEL ON DAILY BASIS ಎಂಬ ಕಾರಣ ನಮೂದಿಸಬೇಕು.

    2. ಈ ಆನ್ ಲೈನ್ ಅರ್ಜಿ ಲಭಿಸಿದ ಒಂದು ಗಂಟೆಯೊಳಗಾಗಿ Additional District Magistrate ಕಾಸರಗೋಡು ಅಥವಾ DIVISIONAL MAGISTRATE ಕಾಞಂಗಾಡ್, ಇವರು ಪಾಸ್ ಗಳನ್ನು ವಿತರಿಸಲು ಆದೇಶ ನೀಡಲಿರುವರು.

    3. ಈ ಪಾಸ್ ಗಳಿಗೆ 28 ದಿವಸಗಳ ಅವಧಿ ಮಾತ್ರ ಇರುತ್ತದೆ.

    4. ಈ ಪಾಸ್ ಗಳನ್ನು ವಿತರಿಸುವ ವೇಳೆ ಹೆಚ್ಚುವರಿ ಜಿಲ್ಲಾ ಮ್ಯಾಜಿಸ್ಟ್ರೇಟ್, ಕಾಸರಗೋಡು/ಉಪ ವಿಭಾಗೀಯ ಮ್ಯಾಜಿಸ್ಟ್ರೇಟ್, ಕಾಞಂಗಾಡ್ ರವರು Comply with the direction in the order of the DISTRICT COLLECTOR dated on 02-06-2020 vide order No 1331/2020/KL ಎಂದು ನಮೂದಿಸಬೇಕಾಗಿದೆ.

    ಈ ಪಾಸ್ ಒದಗಿಸಿದ ಬಳಿಕ , ಪಾಸ್ ನ ಸಮಗ್ರ ಮಾಹಿತಿಗಳನ್ನು ಚೆಕ್ ಪೋಸ್ಟ್ ಸಮೀಪ ಕ್ಯಾಂಪ್ ನಡೆಸುತ್ತಿರುವ
    ಮಂಜೇಶ್ವರ ತಹಶೀಲ್ದಾರ್ ಸಮಕ್ಷಮ ನೀಡಬೇಕಿದೆ.

    ವ್ಯಕ್ತಿಯ ಹೆಸರು, ವಿಳಾಸ, ಫೋನ್ ನಂಬರ್, ಪ್ರವೇಶ ಮತ್ತು ನಿರ್ಗಮನದ ಸಮಯ, ಮರಳಿ ಹೋಗುವ ದಿನಾಂಕ ಇತ್ಯಾದಿ ವಿಚಾರಗಳನ್ನು ನಮೂದು ಮಾಡಬೇಕು.

    6. ರಿಜಿಸ್ಟರ್ ನಲ್ಲಿ ಅನುಕ್ರಮವಾಗಿ ಪಾಸ್ ನಂಬರ್ ನಮೂದಿಸಬೇಕಾಗಿದೆ.

    7. ಪಾಸ್ ಲಭಿಸಿದ ಕೂಡಲೇ ನಿತ್ಯ ಪ್ರಯಾಣಿಕರು ತಲಪಾಡಿ ಅಥವಾ ಆಯಾ ಭಾಗದಲ್ಲಿ ಇರುವ ಚೆಕ್ ಪೋಸ್ಟ್ ಗಳಲ್ಲಿ ಹಾಜರಾಗಿ, ಅಲ್ಲಿರುವ ವೈದ್ಯಕೀಯ ತಂಡದ ಕೋವಿಡ್19 ಪರಿಶೋಧನೆಗೆ ಒಳಪಡಬೇಕಿದೆ.

    ಥರ್ಮಲ್ ಸ್ಕ್ಯಾನರ್ ಮುಂತಾದ ಪರಿಶೋಧನಾ ಉಪಕರಣಗಳ ಮೂಲಕ ಜ್ವರ ಇತ್ಯಾದಿ ಕೋವಿಡ್ ಲಕ್ಷಣಗಳ ಪ್ರಾಥಮಿಕ ಪರೀಕ್ಷೆ ಅಲ್ಲಿ ನಡೆಯಲಿದೆ.

    ಈ ಕೌಂಟರ್ ಬಳಿ ಇರುವ ಇನ್ನೊಂದು ಕೌಂಟರ್ ನಲ್ಲಿ ಪ್ರಯಾಣಿಕರು ಪ್ರವೇಶಿಸುವಾಗ ಮತ್ತು ಮರಳುವಾಗ ದಿನಾಂಕ ನಮೂದಿಸಿ ‌ಸಹಿ ಹಾಕಬೇಕು.

    ಉದ್ಯೋಗ ನಿಮಿತ್ತ ಮಂಗಳೂರು ಅಥವಾ ಕಾಸರಗೋಡಿಗೆ ತೆರಳುವ ಜನರಿಗಾಗಿ ಈ ತುರ್ತು ಸೌಲಭ್ಯವನ್ನು ಕಾಸರಗೋಡು ಜಿಲ್ಲಾಧಿಕಾರಿ ವ್ಯವಸ್ಥೆ ಮಾಡಿದ್ದಾರೆ.

    ಆದರೆ, ಈ ಪ್ರಸ್ತಾಪಕ್ಕೆ ದಕ್ಷಿಣ ಕನ್ನಡ ಜಿಲ್ಲಾಡಳಿತದ ಕಡೆಯಿಂದ ಮುದ್ರೆ ಬಿದ್ದಿಲ್ಲ. ಸದ್ಯಕ್ಕೆ, ಪರಿಶೀಲನೆ ಹಂತದಲ್ಲಿದೆ ಅನ್ನುವ ಮಾಹಿತಿ ಜಿಲ್ಲಾಡಳಿತದಿಂದ ಸಿಕ್ಕಿದೆ.

    Share Information
    Advertisement
    Click to comment

    You must be logged in to post a comment Login

    Leave a Reply