LATEST NEWS
ಮುಂಬೈ ಕನ್ನಡಿಗ ದಯಾ ನಾಯಕ್ ನೇತೃತ್ವದಲ್ಲಿ ಕಾರ್ಯಾಚರಣೆ, 8 ಅಕ್ರಮ ಪಿಸ್ತೂಲ್, ಗುಂಡುಗಳು ವಶ, ಮೂವರ ಬಂಧನ..!
![](https://i0.wp.com/themangaloremirror.in/wp-content/uploads/2024/04/For-Advertisement-Please-Contact.jpg?fit=728%2C90&ssl=1)
ಮುಂಬೈ: ಮಹತ್ವದ ಕಾರ್ಯಾಚರಣೆ ನಡೆಸಿದ್ದ ಮುಂಬೈ ಕ್ರೈಂ ಬ್ರಾಂಚ್ ಅಕ್ರಮ ಪಿಸ್ತೂಲ್ ಹೊಂದಿದ್ದ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.
ಕನ್ನಡಿಗ ದಯಾ ನಾಯಕ್ ನೇತೃತ್ವದ ಬಾಂದ್ರ ಕ್ರೈಮ್ ಬ್ರಾಂಚ್ ನಗರದ ವಿಲೆ ಪಾರ್ಲೆಯಲ್ಲಿ ಈ ಕಾರ್ಯಾಚರಣೆ ನಡೆಸಿದೆ. ಉತ್ತರ ಪ್ರದೇಶದ ಮಿತೈಲಾಲ್ ಗುಲಾಬ್ ಚೌಧರಿ, ಮುಂಬೈಯ ದಾವಲ್ ಚಂದ್ರಪ್ಪ ದೇವರಮನಿ, ಪುಷ್ಪಕ ಜಗದೀಶ್ ಮದ್ವಿ ಬಂಧಿತ ಆರೋಪಿಗಳಾಗಿದ್ದಾರೆ. ಆರೋಪಿಗಳ ಬಳಿ ಇದ್ದ ಒಟ್ಟು 8 ಅತ್ಯಾಧುನಿಕ ಅಕ್ರಮ ಪಿಸ್ತೂಲ್ ಮತ್ತು 138 ಜೀವಂತ ಕಾಟ್ರಿಡ್ಜ್ಗಳನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳ ಬಳಿ ಇನ್ನೂ ಅನೇಕ ಶಸ್ತ್ರಾಸ್ರಗಳಿರುವ ಮಾಹಿತಿ ಇದ್ದು ಈ ಬಗ್ಗೆ ತನಿಖೆ ಮುಂದುವರೆದಿದೆ.
You must be logged in to post a comment Login