Connect with us

LATEST NEWS

 ಗ್ಯಾಸ್ ಸೋರಿಕೆಗೆ ಓಮ್ನಿ ಕಾರ್ ಹಟ್ಟಿ ಭಸ್ಮ: ಓರ್ವ ಗಾಯ

 ಗ್ಯಾಸ್ ಸೋರಿಕೆಗೆ ಓಮ್ನಿ ಕಾರ್ ಹಟ್ಟಿ ಭಸ್ಮ: ಓರ್ವ ಗಾಯ

ಮಂಗಳೂರು,ಡಿಸೆಂಬರ್ 08 :ಕಾರಿನಲ್ಲಿದ್ದ ಗ್ಯಾಸ್ ಸೋರಿಕೆಯ ಪರಿಣಾಮ  ಕಾರಿನೊಂದಿಗೆ, ಹಟ್ಟಿಯೂ ಭಸ್ಮವಾದ ಘಟನೆ ಮಂಗಳೂರು ಹೊರವಲಯದ ಮೂಡುಕೊಣಾಜೆ ಎಂಬಲ್ಲಿ ಸಂಭವಿಸಿದೆ.

ಮೂಡಬಿದೆರೆಯ ಮೂಡುಕೊಣಾಜೆ ಗ್ರಾಮದ ಮಾರಿಬೆಟ್ಟು ಎಂಬಲ್ಲಿ  ಈ ದುರ್ಘಟನೆ ಸಂಭವಿಸಿದೆ.

ಮೂಡುಬಿದಿರೆ ಶ್ರೀಮಹಾವೀರ ಸಭಾಭವನದ ವ್ಯವಸ್ಥಾಪಕರಾಗಿರುವ ಜಗದೀಶ್ ಜೈನ್ ಅವರು ಮನೆಯ ಪಕ್ಕದ ಹಟ್ಟಿ ಎದುರು ತಮ್ಮ ಓಮ್ನಿ ಕಾರು ಅನ್ನು ತೊಳೆಯುತ್ತಿದ್ದ ವೇಳೆ ಕಾರಿನ ಗ್ಯಾಸ್ ಸೋರಿಕೆಗೊಂಡಿದೆ.

ಈ ಸಂದರ್ಭ ಪಕ್ಕದಲ್ಲೇ ಇದ್ದ ಬಚ್ಚಲು ಮನೆಗೆ ಹಾಕಿದ್ದ ಬೆಂಕಿ  ಆಮ್ನಿ ಕಾರಿಗೆ ಆವರಿಸಿದೆ.

ಬೆಂಕಿಯು ಕ್ಷಣಾರ್ಧದಲ್ಲೇ ಕಾರನ್ನು ಆವರಿಸಿದ್ದು,ಜೊತೆಗೆ ಪಕ್ಕದ ಹಟ್ಟಿಯಲ್ಲಿ ಇಟ್ಟಿದ್ದ ಬೈಹುಲ್ಲಿಗೆ ತಾಗಿ ಬೆಂಕಿಯ ತೀವ್ರತೆ ಹೆಚ್ಚಾಗಿದೆ.

ಈ ಸಂದರ್ಭದಲ್ಲಿ ಜಗದೀಶ್ ಅವರ ಮುಖ, ಬೆನ್ನು ಹಾಗೂ ಕೈಗಳು ಗಾಯವಾಗಿದೆ.

ದನಗಳನ್ನು ಹಟ್ಟಿಯಿಂದ ಹೊರಗೆ ಕಟ್ಟಲಾಗಿತ್ತು. ಸ್ಥಳೀಯರು ಮತ್ತು ಅಗ್ನಿಶಾಮಕ ದಳದ ಸಿಬಂದಿಗಳು ಸ್ಥಳಕ್ಕೆ ಧಾವಿಸಿ ಬೆಂಕಿ ಆರಿಸಿದ್ದಾರೆ. ಸ್ಥಳೀಯ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *