Connect with us

    LATEST NEWS

    ‘ಓ ದೇವರೆ ನಮ್ಮ ಕೇಡಿನಿಂದ ರಕ್ಷಿಸಿ’, ಕುದುರೆ ಮುಖ ಕ್ರಾಸ್ ನಿಂದ ಜೋಕಟ್ಟೆ ಕಡೆಗೆ ತೆರಳುವ ರಸ್ತೆ ದುಃಸ್ಥಿತಿ ಇದು..!

    ಮಂಗಳೂರು : ಬೈಕಂಪಾಡಿ ಕೈಗಾರಿಕ ವಲಯಕ್ಕೆ ಸೇರಿರುವ MRPL ಅಧೀನದಲ್ಲಿ ಇರುವ ODC (ಕುದುರೆ ಮುಖ ಕ್ರಾಸ್ ನಿಂದ ಜೋಕಟ್ಟೆ ಕಡೆಗೆ ತೆರಳುವ) ರಸ್ತೆಯ ದುಃಸ್ಥಿತಿ ಇದಾಗಿದ್ದು ಓ ದೇವರೆ ನಮ್ಮ ಕೇಡಿನಿಂದ ರಕ್ಷಿಸಿ ಎಂದು ದೇವರ ಮೊರೆ ಹೋಗಾ ಬೇಕಾದ ಪರಿಸ್ಥಿತಿ ಇಲ್ಲಿ ಜನರದ್ದು.

     

    SEZ ಈ ರಸ್ತೆಯ ಮೇಲ್ಭಾಗದಲ್ಲಿ ಫ್ಲೈ ಓವರ್ ನಿರ್ಮಾಣ ಮಾಡಿದ ತರುವಾಯ ಈ ರಸ್ತೆಯನ್ನು mrpl ಪೂರ್ತಿ ಕಡೆಗಣಿಸಿದೆ. ಹಲವು ಮನವಿ, ಪ್ರತಿಭಟನೆಗಳ ತರುವಾಯವೂ ಜಿಲ್ಲಾಡಳಿತ, KIADB ಈ ರಸ್ತೆಯನ್ನು mrpl ನಿಂದ ದುರಸ್ತಿಗೊಳಿಸಲು ಸಾಧ್ಯವಾಗಿಲ್ಲ. ಡಾ. ರಾಜೇಂದ್ರ ಕೆ ವಿ. ಜಿಲ್ಲಾಧಿಕಾರಿ ಆಗಿದ್ದ ಅವಧಿಯಲ್ಲಿ ಖುದ್ದು ಪರಿಶೀಲನೆ ನಡೆಸಿ, ಕಂಪೆನಿಗಳ ಸಭೆ ನಡೆಸಿ ದುರಸ್ತಿಗೆ ಯೋಜನೆ ಸಿದ್ದಪಡಿಸಿದರೂ MRPL ಯಾವುದಕ್ಕೂ ಬಗ್ಗಲಿಲ್ಲ. KIADB ವ್ಯಾಪ್ತಿಯ ಹಲವು ಮಧ್ಯಮ ಕೈಗಾರಿಕೆಗಳು ಈ ರಸ್ತೆಯನ್ನು ಬಳಸುತ್ತಿದ್ದರೂ KIADB ಸರಿಯಾದ ಕ್ರಮಗಳನ್ನು ಕೈಗೊಳ್ಳುತ್ತಿಲ್ಲ.

     

    ಮಂಗಳವಾರ ಈ ಕುರಿತು ಮತ್ತೊಮ್ಮೆ KIADB ಅಧಿಕಾರಿಗಳನ್ನು ಭೇಟಿಯಾಗಿ ಸಮಸ್ಯೆ ಬಗೆಹರಿಸುವಂತೆ ವಿನಂತಿಸಲಾಗಿದ್ದರೂ ಅಧಿಕಾರಿಗಳು ಅಸಹಾಯಕತೆ ತೋಡಿಕೊಂಡಿದ್ದಾರೆ. MRPL ಗೆ ಮತ್ತೊಮ್ಮೆ ಪತ್ರ ಬರೆಯುವುದಾಗಿ ಅವರು ಭೇಟಿಯಾದ ನಿಯೋಗಕ್ಕೆ ತಿಳಿಸಿದ್ದಾರೆ. ವಾರದೊಳಗಡೆ ಒಂದು ತೀರ್ಮಾನ ಕೈಗೊಳ್ಳದಿದ್ದಲ್ಲಿ ರಸ್ತೆ ತಡೆ ನಡೆಸುವ ಎಚ್ಚರಿಕೆ ನೀಡಲಾಗಿದೆ.

    Share Information
    Advertisement
    Click to comment

    You must be logged in to post a comment Login

    Leave a Reply