Connect with us

    LATEST NEWS

    ದಕ್ಷಿಣಕನ್ನಡ ಜಿಲ್ಲೆಯ ಮೂರು ಕಡೆ ಎನ್ಐಎ ದಾಳಿ….!!

    ಮಂಗಳೂರು ಅಗಸ್ಟ್ 13: ಜನರಲ್ಲಿ ಕೋಮುವಾದ ಕೆರಳಿಸುವ ಮತ್ತು ದೇಶವನ್ನು ಅಸ್ಥಿರಗೊಳಿಸುವ ಮೂಲಕ ಶಾಂತಿ ಕದಡುವ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಪಿತೂರಿಯನ್ನು ವಿಫಲಗೊಳಿಸಲು ದಕ್ಷಿಣಕನ್ನಡ ಜಿಲ್ಲೆ ಸೇರಿದಂತೆ ದೇಶದ 14 ಕಡೆಗಳಲ್ಲಿ ಎನ್ಐಎ ದಾಳಿ ನಡೆಸಿದೆ. ಮಂಗಳೂರಿನ ಉಳ್ಳಾಲ ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಯ 3 ಕಡೆ NIA ಕಾರ್ಯಾಚರಣೆ ನಡೆಸಿದೆ.


    ಉಳ್ಳಾಲದ ಕಿನ್ಯಾ, ಒಳಚ್ಚಿಲ್ ಪದವು ಮತ್ತು ಪಾಣೆಮಂಗಳೂರಿನ ಮೆಲ್ಕಾರ್ ನಲ್ಲಿ ಎನ್ ಐ ಎ ದಾಳಿ ನಡೆದಿದೆ. ಮೆಲ್ಕಾರ್ ನಲ್ಲಿರು ಧಾರ್ಮಿಕ ಶಿಕ್ಷಕರೊಬ್ಬರ ಮನೆ ಮೇಲೆ ಎನ್ಐಎ ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ ಎಂದು ಹೇಳಲಾಗಿದೆ. ಪಿಎಫ್ಐ ನಿಷೇಧದ ಬಳಿಕ ಹಲವಾರು ಪಿಎಫ್ಐ ನಾಯಕರುಗಳನ್ನು ಬಂಧಿಸಲಾಗಿದ್ದು, ಅವರ ಹೇಳಿಕೆಯ ಹಿನ್ನಲೆ ಈ ದಾಳಿ ನಡೆದಿದೆ ಎನ್ನಲಾಗಿದೆ.

    Share Information
    Advertisement
    Click to comment

    You must be logged in to post a comment Login

    Leave a Reply