Connect with us

LATEST NEWS

ಪತಿಗೆ ಅನ್ಯ ಮಹಿಳೆಯೊಂದಿಗೆ ಸಂಬಂಧದ ಶಂಕೆ-ಮದುವೆಯಾದ ಎರಡೇ ತಿಂಗಳಲ್ಲಿ ನವ ವಧು ಆತ್ಮಹತ್ಯೆ..! 

ಮದುವೆಯಾದ ಎರಡೇ ತಿಂಗಳಲ್ಲಿ ನವವಿವಾಹಿತೆ ಪತಿಯ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೇರಳದ ತಿರುವನಂತಪುರಂದಲ್ಲಿ  ನಡೆದಿದೆ.

ತಿರುವನಂತಪುರಂ : ಮದುವೆಯಾದ ಎರಡೇ ತಿಂಗಳಲ್ಲಿ ನವವಿವಾಹಿತೆ ಪತಿಯ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೇರಳದ ತಿರುವನಂತಪುರಂದಲ್ಲಿ  ನಡೆದಿದೆ.

ಅರುವಿಕರ ಮೂಲದ 23 ವರ್ಷದ ರೇಷ್ಮಾ ಮನೆಯೊಳಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.

ಪತಿ ಬೇರೆ ಮಹಿಳೆಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಾನೆ ಎಂಬ ಶಂಕೆಯಿಂದ ನವ ವಧು ರೇಷ್ಮಾ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಪೊಲೀಸರು ಶಂಕಿಸಿದ್ದಾರೆ.

ಭಾನುವಾರ ಬೆಳಗಿನ ಜಾವ ಮೂರು ಗಂಟೆಗೆ ರೇಷ್ಮಾ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬೆಳಗ್ಗೆ ಕೊಠಡಿ ತೆರೆಯದೇ ಇರುವುದನ್ನು ಮನೆಯವರು ಗಮನಿಸಿದಾಗ ಮೃತಪಟ್ಟ ವಿಷಯ ತಿಳಿದು ಬಂದಿದೆ.

ಘಟನೆ ವೇಳೆ ಪತಿ ಅಕ್ಷಯ್ ರಾಜ್ ಮನೆಯಲ್ಲಿ ಇರಲಿಲ್ಲ ಎಂದು ಕುಟುಂಬಸ್ಥರು ಹೇಳಿದ್ದಾರೆ. ಮಲಗುವ ಕೋಣೆಯಲ್ಲಿ ಫ್ಯಾನ್‌ಗೆ ನೇಣು ಬಿಗಿದ ಸ್ಥಿತಿಯಲ್ಲಿ ಶವ ಪತ್ತೆಯಾಗಿದೆ. ಕುಟುಂಬಸ್ಥರು ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಪೋಲೀಸರ ಪ್ರಕಾರ ರೇಷ್ಮಾಗೆ ತನ್ನ ಪತಿ ಅಕ್ಷಯ್ ರಾಜ್ ಬೇರೆ ಮಹಿಳೆಗೆ ಫೋನ್ ಮಾಡಿ ಕರೆ ಮಾಡುತ್ತಿದ್ದಾಳೆ ಎಂಬ ಅನುಮಾನವಿತ್ತು.

ಈ ಬಗ್ಗೆ ಸ್ಪಷ್ಟನೆ ನೀಡುವ ಟಿಪ್ಪಣಿ ಪೊಲೀಸರಿಗೆ ಸಿಕ್ಕಿದೆ. ಜೂನ್ 12 ರಂದು ಅಕ್ಷಯ್ ರಾಜ್ ಜೊತೆ ರೇಷ್ಮಾ ಮದುವೆ ನಡೆದಿತ್ತು.

ಮದುವೆಯಾದ ಎರಡೇ ತಿಂಗಳಲ್ಲಿ ಇಂತಹ ಅನುಭವ ಆಗಿದ್ದರಿಂದ ರೇಷ್ಮಾ ತುಂಬಾ ಖಿನ್ನತೆಗೆ ಒಳಗಾಗಿದ್ದರು ಎನ್ನುತ್ತಾರೆ ಕುಟುಂಬಸ್ಥರು.

ಘಟನೆ ಕುರಿತು ಪೊಲೀಸರು ವಿಸ್ತೃತ ತನಿಖೆ ಆರಂಭಿಸಿದ್ದಾರೆ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *