Connect with us

LATEST NEWS

ನೀರುಮಾರ್ಗ ರಿಕ್ಷಾ ಚಾಲಕನ ಮೇಲೆ ತಲವಾರ್ ದಾಳಿ ಪ್ರಕರಣ ಇಬ್ಬರು ಆರೋಪಿಗಳ ಬಂಧನ

ನೀರುಮಾರ್ಗ ರಿಕ್ಷಾ ಚಾಲಕನ ಮೇಲೆ ತಲವಾರ್ ದಾಳಿ ಪ್ರಕರಣ ಇಬ್ಬರು ಆರೋಪಿಗಳ ಬಂಧನ

ಮಂಗಳೂರು ಅಕ್ಟೋಬರ್ 18: ಮಂಗಳೂರು ಹೊರವಲಯದ ನೀರುಮಾರ್ಗ ಪಡು ಎಂಬಲ್ಲಿ ಯುವಕನೋರ್ವನ ಮೇಲೆ ತಲವಾರ್ ನಿಂದ ಮಾರಣಾಂತಿಕ ಹಲ್ಲೆ ನಡೆಸಿದ್ದ ಇಬ್ಬರು ಆರೋಪಿಗಳನ್ನು ಮಂಗಳೂರು ಗ್ರಾಮಾಂತರ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಬಂಧಿತರನ್ನು ಅಡ್ಯಾರ್ ಕಟ್ಟೆಯ ಪ್ರಾಣೇಶ್ ಮತ್ತು ವಳಚ್ಚಿಲ್‌ ನ ನಿತಿನ್ ಎಂದು ಗುರುತಿಸಲಾಗಿದೆ. ಬಂಧಿತ ಇಬ್ಬರೂ ಆರೋಪಿಗಳು ಮಾದಕ ವ್ಯಸನಿಗಳು ಎಂದು ತಿಳಿದು ಬಂದಿದ್ದು, ಸ್ಥಳೀಯ ದೈವಸ್ಥಾನದಲ್ಲಿ ಮೋಜು-ಮಸ್ತಿ ನಡೆಸುತ್ತಿದ್ದ ಯುವಕರನ್ನು ಸ್ಥಳೀಯ ನಿವಾಸಿಯಾದ ಸಂತೋಷ್ ವಿರೋಧಿಸಿದ್ದ ಈ ಹಳೆಯ ದ್ವೇಷದ ಹಿನ್ನೆಲೆಯಲ್ಲಿ ನೀರು ಮಾರ್ಗದಿಂದ ತನ್ನ ಮನೆ ಬಿತ್ತುಪಾದೆಗೆ ತೆರಳುತ್ತಿದ್ದ ಸಂದರ್ಭ , ಸ್ಕೂಟರ್ ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಮಾರ್ಗ ಮಧ್ಯೆ ರಿಕ್ಷಾವನ್ನು ಅಡ್ಡಗಟ್ಟಿ ತಲವಾರಿನಿಂದ ದಾಳಿ ನಡೆಸಿದ್ದಾರೆ.

ತೀವ್ರವಾಗಿ ಗಾಯಗೊಂಡ ಸಂತೋಷ್ ನನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ಪ್ರಕರಣ ದಾಖಲು ಮಾಡಿದ್ದ ಮಂಗಳೂರು ಗ್ರಾಮಾಂತರ ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಲು ಯಶಸ್ವಿಯಾಗಿದ್ದಾರೆ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *