UDUPI
ನಯಾ ಭಾರತ್ ಸಶಕ್ತ ಭಾರತ ಥೀಮ್ : ಸೆಲ್ಫಿ ಬೂತ್
ಉಡುಪಿ, ಆಗಸ್ಟ್ 17 : ಕೇಂದ್ರ ಸರ್ಕಾರದ ಸಮಾಚಾರ ಮತ್ತು ಪ್ರಸಾರ ಸಚಿವಾಲಯ, ಕೇಂದ್ರ ಸಂವಹನ ಇಲಾಖೆ ವತಿಯಿಂದ ಉಡುಪಿ ಕೃಷ್ಣಮಠದ ರಾಜಾಂಗಣದ ಆವರಣದಲ್ಲಿ ಸ್ವಾತಂತ್ರ್ಯೋತ್ಸವದ ಅಂಗವಾಗಿ ನಯಾ ಭಾರತ್ ಸಶಕ್ತ ಭಾರತ ಥೀಮ್ನಲ್ಲಿ ಸೆಲ್ಫಿ ಬೂತ್ ಏರ್ಪಡಿಸಿದ್ದು, ಕೃಷ್ಣಾಪುರ ಪರ್ಯಾಯ ಮಠದ ದಿವಾನರಾದ ವರದರಾಜ ಭಟ್ ಸೆಲ್ಫಿ ತೆಗೆದುಕೊಂಡರು.
ಮುಂದಿನ ಮೂರು ದಿನ ಈ ಸೆಲ್ಫಿ ಬೂತನ್ನು ರಾಜಾಂಗಣದಲ್ಲಿ ಇರಿಸಲಾಗಿದ್ದು, ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.
You must be logged in to post a comment Login