Connect with us

    LATEST NEWS

    ಉಳ್ಳಾಲದಲ್ಲಿ ಕಲ್ಲಿನಲ್ಲಿ ಹೊಡೆದು 12 ವರ್ಷದ ಬಾಲಕನ ಭೀಕರ ಕೊಲೆ…!!

    ಮಂಗಳೂರು ಎಪ್ರಿಲ್ 4: 12 ವರ್ಷದ ಬಾಲಕನೊಬ್ಬನ ಶವ ಕೊಲೆಯಾದ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ಉಳ್ಳಾಲ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಕೆ.ಸಿ. ರೋಡ್‌ ನಡೆದಿದೆ. ಈ ಪ್ರಕರಣ ಇಡೀ ಜಿಲ್ಲೆಯನ್ನೇ ಬೆಚ್ಚಿಬಿಳಿಸಿದೆ.


    ಮೃತ ಬಾಲಕನನ್ನು ಆಕೀಫ್ (13) ಎಂದು ಗುರುತಿಸಲಾಗಿದೆ. ಈತ ಫನಾಹ್ ಶಾಲೆಯಲ್ಲಿ ಆರನೆ ತರಗತಿ ಕಲಿಯುತ್ತಿದ್ದಾನೆ. ಬಾಲಕನ ದೇಹವು ಮನೆಯಿಂದ ಸುಮಾರು 3 ಕಿ.ಮೀ ದೂರದಲ್ಲಿ ಪತ್ತೆಯಾಗಿದ್ದು ತಲೆಗೆ ಕಲ್ಲಿನಿಂದ ಹೊಡೆದು ಕೊಲೆ ಮಾಡಿದ ಸ್ಥಿತಿಯಲ್ಲಿ ಪತ್ತೆಯಾಗಿದೆ.


    ಏಪ್ರಿಲ್ 3 ರ ಶನಿವಾರ ಸಂಜೆ ಮದ್ರಸದಿಂದ ಬಂದ ಹಕೀಬ್ ನಂತರ ಅಂಗಡಿಗೆ ಹೋಗಿ ಬರುತ್ತೇನೆ ಎಂದು ಹೇಳಿ ಹೋದವನು ನಾಪತ್ತೆಯಾಗಿದ್ದಾನೆ ಎಂದು ಮೂಲಗಳು ತಿಳಿಸಿವೆ. ಆತಂಕಕ್ಕೊಳಗಾದ ಅವರ ಪೋಷಕರು ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಹಕೀಬ್‌ ಕಾಣಿಯಾದ ಬಗ್ಗೆ ದೂರು ದಾಖಲಿಸಿದ್ದರು. ಘಟನಾ ಸ್ಥಳಕ್ಕೆ ಪೊಲೀಸ್ ಆಯುಕ್ತ ಶಶಿಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply