Connect with us

LATEST NEWS

ಕಲ್ಲಡ್ಕ ಪ್ರಭಾಕರ ಭಟ್ ಮೇಲೆ FIR ಹಾಕಲು ರಾಜ್ಯ ಸರಕಾರ ಹಿಂಜರಿಯುತ್ತಿರುವುದು ಯಾಕೆ ?

ಮಂಗಳೂರು ಡಿಸೆಂಬರ್ 25: ಮಂಡ್ಯದಲ್ಲಿ ನಡೆಯುತ್ತಿರುವ ಹನುಮ ಸಂಕೀರ್ತನಾ ಯಾತ್ರೆಯಲ್ಲಿ ವಿವಾದಾತ್ಮಕ ಹೇಳಿಕೆ ನೀಡಿರುವ ಕಲ್ಲಡ್ಕ ಪ್ರಭಾಕರ ಭಟ್ ಅವರ ಮೇಲೆ ಕಾನೂನೂ ಕ್ರಮ ಕೈಗೊಳ್ಳಲು ಸರಕಾರ ಹಿಂದೇಟು ಹಾಕುತ್ತಿದೆ ಎಂದು ಡಿವೈಎಫ್‌ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಆರೋಪಿಸಿದ್ದಾರೆ.


ತಮ್ಮ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಅವರು ಕಲ್ಲಡ್ಕ ಪ್ರಭಾಕರ ಭಟ್ ಮೇಲೆ FIR ಹಾಕಲು ರಾಜ್ಯ ಸರಕಾರ ಹಿಂಜರಿಯುತ್ತಿರುವುದು ಯಾಕೆ ? ಮುಸ್ಲಿಂ ಮಹಿಳೆಯರ ಕುರಿತು ಭಟ್ ಹೇಳಿಕೆ ಕಾನೂನು ಕ್ರಮಕ್ಕೆ ಅರ್ಹ ಆಗಿಲ್ಲವೆ! ಮುಸಲ್ಮಾನ ಮುಖಂಡನೊಬ್ಬ ಈ ರೀತಿ ಭಿನ್ನ ಧರ್ಮದ ಕುರಿತು ಅಸಭ್ಯವಾಗಿ ಮಾತಾಡಿದ್ದರೆ ಏನೆಲ್ಲ ಸಂಭವಿಸುತ್ತಿತ್ತು ? ಸಿದ್ದರಾಮಯ್ಯನವರು ಮುಸ್ಲಿಮರನ್ನು “ಖುಷಿಪಡಿಸುವ” ಹೇಳಿಕೆಗಳನ್ನು ನೀಡಿ ಬಿಜೆಪಿಗರ ಬಾಯಲ್ಲಿ ಮುಸ್ಲಿಮರನ್ನು ಹೊಲಸು ಮಾತುಗಳ ನಿಂದನೆಗೆ ಅವಕಾಶಮಾಡಿಕೊಡುತ್ತಿದ್ದಾರೆ.

ಸಿದ್ದರಾಮಯ್ಯನವರಿಗೆ ಪ್ರಾಮಾಣಿಕತೆ ಇದ್ದರೆ ಕಲ್ಲಡ್ಕ ಪ್ರಭಾಕರ ಭಟ್ ರ ಮೇಲೆ ಕಠಿಣ ಸೆಕ್ಷನ್ ಅಡಿ ಮೊಕದ್ದಮೆ ಹೂಡಿ ಜೈಲಿಗೆ ಕಳುಹಿಸಲಿ ಎಂದಿದ್ದಾರೆ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *