LATEST NEWS
ಮುಲ್ಕಿ: ನಾಪತ್ತೆಯಾಗಿದ್ದ ಆನಂದ ಕೊಟ್ಯಾನ್ ಶವವಾಗಿ ಬಾವಿಯಲ್ಲಿ ಪತ್ತೆ…!!
![](https://i0.wp.com/themangaloremirror.in/wp-content/uploads/2024/04/For-Advertisement-Please-Contact.jpg?fit=728%2C90&ssl=1)
ಕಳೆದ ಹಲವು ದಿನಗಳ ಹಿಂದೆ ನಾಪತ್ತೆಯಾಗಿದ್ದ ಮುಲ್ಕಿ ಸಮೀಪದ ಕೊಲ್ಲೂರು ಪದವು ನಿವಾಸಿ ಆನಂದ ಕೊಟ್ಯಾನ್ (65) ಎಂಬವರ ಮೃತದೇಹ ಬಾವಿಯಲ್ಲಿ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಮುಲ್ಕಿ: ಕಳೆದ ಹಲವು ದಿನಗಳ ಹಿಂದೆ ನಾಪತ್ತೆಯಾಗಿದ್ದ ಮುಲ್ಕಿ ಸಮೀಪದ ಕೊಲ್ಲೂರು ಪದವು ನಿವಾಸಿ ಆನಂದ ಕೊಟ್ಯಾನ್ (65) ಎಂಬವರ ಮೃತದೇಹ ಬಾವಿಯಲ್ಲಿ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ.
![](https://i0.wp.com/themangaloremirror.in/wp-content/uploads/2024/06/IMG-20240626-WA0023.jpg?fit=1280%2C670&ssl=1)
ಮಾಹಿತಿ ಪಡೆದ ತಕ್ಷಣ ಮುಲ್ಕಿ ಪೊಲೀಸರು ಸ್ಥಳಕ್ಕೆ ಆಗಮಿಸಿ ಆಸಿಫ್ ಆಪದ್ಬಾಂಧವ ಅವರ ಸಹಕಾರದೊಂದಿಗೆ ಶವವನ್ನು ಬಾವಿಯಿಂದ ಮೇಲಕ್ಕೆ ಎತ್ತಲಾಯಿತು.
ಕಾರ್ಯಚರಣೆಯಲ್ಲಿ ಮುಲ್ಕಿ ಪೊಲೀಸರು, ಸಮಾಜಸೇವಕ ಅದ್ದಿ ಬೊಳ್ಳೂರು, ಮುನೀರ್ ಮಲ್ಲೂರು ಮತ್ತು ಸ್ಥಳೀಯರು ಸಹಕರಿಸಿದರು.
ಈ ಬಗ್ಗೆ ಮುಲ್ಕಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆಸಿಫ್ ಆಪತ್ಬಾಂಧವ ಆಂಬುಲೆನ್ಸ್ ಮೂಲಕ ಶವವನ್ನು ಮುಲ್ಕಿ ಆರೋಗ್ಯ ಸಮುದಾಯ ಕೇಂದ್ರದ ಶವಾಗಾರಕ್ಕೆ ಸಾಗಿಸಲಾಯಿತು.
You must be logged in to post a comment Login