Connect with us

    LATEST NEWS

    ಉಡುಪಿ ಹೆದ್ದಾರಿಯ ಸಂತೆಕಟ್ಟೆ ಅಂಡರ್‌ಪಾಸ್ ಕಾಮಗಾರಿ ಸಕಾಲದಲ್ಲಿ ಮುಗಿಸದಿದ್ದರೆ ಕೇಂದ್ರ ಸಚಿವರಿಗೆ ದೂರು- ಸಂಸದ ಕೋಟ ಎಚ್ಚರಿಕೆ

    ಉಡುಪಿ : ಉಡುಪಿ ಹೆದ್ದಾರಿಯ ಸಂತೆಕಟ್ಟೆ ಅಂಡರ್‌ಪಾಸ್ ಕಾಮಗಾರಿ ಸಕಾಲದಲ್ಲಿ ಮುಗಿಸದಿದ್ದರೆ ಕೇಂದ್ರ ಸಚಿವರಿಗೆ ದೂರು ನೀಡುವುದಾಗಿ ಸಂಸದ ಕೋಟ ಶ್ರೀನಿವಾಸ್ ಪೂಜಾರಿ ಎಚ್ಚರಿಕೆ ನೀಡಿದ್ದಾರೆ.

    ಕಲ್ಯಾಣಪುರ ಸಂತೆಕಟ್ಟೆ ಅಂಡರ್ ಪಾಸ್ ನಿರ್ಮಾಣ ಪ್ರಕರಣದಲ್ಲಿ ವಿಳಂಬ ನೀತಿಯಿಂದಾಗಿ ಸಾರ್ವಜನಿಕರಿಗೆ ಅನಾನುಕೂಲವಾಗುತ್ತಿದ್ದು ನಿತ್ಯ ಅಪಘಾತಗಳು ನಡೆಯುತ್ತಿರುವುದು ಅಲ್ಲದೆ ದ್ವಿಚಕ್ರ ಸವಾರರು ಮತ್ತು ಸಣ್ಣಪುಟ್ಟ ವಾಹನಗಳ ಮಾಲೀಕರಿಗೆ ಪ್ರಯಾಣಿಸಲಾಗದಷ್ಟು ಪರಿಸ್ಥಿತಿ ಗಂಭೀರವಾಗಿ ಪರಿಗಣಿಸಿದೆ. ತಿಂಗಳ ಹಿಂದೆ ತಾನು ಜಿಲ್ಲಾಧಿಕಾರಿಗಳು ಮತ್ತು ಎಸ್.ಪಿ. ಜೊತೆಯಲ್ಲಿ ಸ್ಥಳಕ್ಕೆ ಭೇಟಿ ಕೊಟ್ಟಾಗ ಆದಷ್ಟು ಬೇಗ ಕಾಮಗಾರಿ ಮುಗಿಸಲಾಗುವುದು ಎಂದು ಇಂಜಿನಿಯರ್ ಮತ್ತು ಗುತ್ತಿಗೆದಾರರಾದ ತಾವುಗಳು ತಿಳಿಸಿದ್ದೀರಿ. ಇವತ್ತು ಓಡಾಡಲಾಗದಷ್ಟು ಪರಿಸ್ಥಿತಿ ನಿರ್ಮಾಣವಾದಾಗಲೂ ಕೂಡ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಮೌನವಹಿಸಿರುವುದನ್ನು ಸಂಸದ ಕೋಟ ತೀವ್ರವಾಗಿ ತರಾಟೆಗೆ ತೆಗೆದುಕೊಂಡರು. ಈಗ ತೀವ್ರತೆ ಗೊಂಡಿರುವ ಮಳೆ ಕಡಿಮೆಯಾಗುತ್ತಲೇ ಕಾಮಗಾರಿ ಪ್ರಾರಂಭಿಸದಿದ್ದರೆ ಕೇಂದ್ರ ಸಚಿವರಿಗೆ ದೂರು ನೀಡಿ ಶಿಸ್ತು ಕ್ರಮ ಜರಗಿಸುವ ಬಗ್ಗೆ ಕ್ರಮ ಕೈಗೊಳ್ಳುವುದಾಗಿ ರಾಷ್ಟ್ರೀಯ ಹೆದ್ದಾರಿ ಅಧಿಕಾರದ ಅಧಿಕಾರಿಗಳಿಗೆ ಸಂಸದ ಕೋಟ ಎಚ್ಚರಿಕೆ ನೀಡಿದರು. ಸುಧೀರ್ಘ ಮಾತುಕತೆಯ ನಂತರ ಅಧಿಕಾರಿಗಳು ವಿಪರೀತ ಮಳೆ ನಿಲ್ಲುತ್ತಲೇ ಕಾಮಗಾರಿ ಪ್ರಾರಂಭಿಸುತ್ತೇವೆ ಎಂಬ ವಿಶ್ವಾಸದ ಮಾತುಗಳನ್ನು ಹೇಳಿದರು. ಸಭೆಯಲ್ಲಿ ಜಿಲ್ಲಾಧಿಕಾರಿ ಶ್ರೀಮತಿ ವಿದ್ಯಾ ಕುಮಾರಿ, ಅಪರ ಜಿಲ್ಲಾಧಿಕಾರಿಗಳಾದ ಮಮತಾರವರು ರಾಷ್ಟ್ರೀಯ ಹಿರಿಯ ಅಧಿಕಾರಿಗಳು ಭಾಗವಹಿಸಿದರು.

    Share Information
    Advertisement
    Click to comment

    You must be logged in to post a comment Login

    Leave a Reply