DAKSHINA KANNADA
ಹಿಂದೂ ಪರ ಸಂಘಟನೆಗಳಿಗೆ ದಮ್ ಇದ್ದರೆ ಲವ್- ಜಿಹಾದ್ ಕಾನೂನು ಜಾರಿಗೆ ತರಲಿ: ಶಾಸಕ ಖಾದರ್ ಬಹಿರಂಗ ಸವಾಲ್..!
ಮಂಗಳೂರು : ಲವ್ – ಜಿಹಾದ್ ಹೆಸರಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನೈತಿಕ ಪೋಲಿಸ್ ಗಿರಿ ಹೆಚ್ಚಾಗಿದೆ. ಹಿಂದೂ ಪರ ಸಂಘಟನೆಗಳಿಗೆ ದಮ್ ಇದ್ದರೆ ಲವ್- ಜಿಹಾದ್ ಕಾನೂನು ಜಾರಿಗೆ ತರಲಿ ಎಂದು ಶಾಸಕ ಯು,ಟಿ. ಖಾದರ್ ಸವಾಲ್ ಹಾಕಿದ್ದಾರೆ.
ಮಂಗಳೂರಿನಲ್ಲಿ ಕರೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು. ಲವ್ -ಜಿಹಾದ್ ಬಗ್ಗೆ ಸುದ್ದಿ ಗೋಷ್ಟಿ ನಡೆಸಲಿಕ್ಕೆ ಸಂಘಟನೆಗಳಿಗೆಅನುಮತಿ ನೀಡಿದ್ದು ಯಾರು ಎಂದು ಪ್ರಶ್ನಿಸಿದ ಖಾದರ್ ಜಿಲ್ಲೆಯಲ್ಲಿ ನೈತಿಕ ಪೋಲಿಸ್ ಗಿರಿ ಹೆಚ್ಚಾಗಿದೆ.
ಸಾಮಾಜಿಕ ಜಾಲತಾಣದಲ್ಲಿ ಕೋಮು ಗಲಭೆಗಳಿಗೆ ಪ್ರಚೋದನೆ ನೀಡುತ್ತಿದ್ದಾರೆ ಎಂದು ಆರೋಪಿದ ಅವರು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಸಂಫೂರ್ಣ ಹದಗೆಟ್ಟಿದೆ ಎಂದು ಆರೋಪಿಸಿದರು.
ಪಬ್ ಜೀ ಯಂತಹ ಆಟಗಳು ಇಂದು ರಾಜರೋಷವಾಗಿ ಸನ್ನ ಮಕ್ಕಳ ಕೈ ಬಂದಿವೆ. ಈ ಬ್ಯಾನ್ ಆದ ಆಟಗಳು ಹೇಗೆ ಮತ್ತೆ ಚಾಲ್ತಿಯಲ್ಲಿವೆ.
ಈ ಗೇಮ್ ನಿಂದ ವಿದ್ಯಾರ್ಥಿಗಳ ಮನಸ್ಥಿತಿ ವಿಕಾರವಾಗುತ್ತಿದೆ ಆದ್ದರಿಂದ ಕೇಂದ್ರ ಸರಕಾರ ಹಾಗೂ ರಾಜ್ಯ ಸರಕಾರ ತಕ್ಷಣ ಕಾರ್ಯ ಪ್ರವೃತ್ತಿ ಆಗಬೇಕು ಮತ್ತು ಕೂಡಲೇ ಆನ್ ಲೈನ್ ಪಬ್ ಜಿ ನಂತಹ ಗೇಮ್ ನಿಷೇಧ ಮಾಡಬೇಕೆಂದು ಆಗ್ರಹಿಸಿದರು.
You must be logged in to post a comment Login