Connect with us

    DAKSHINA KANNADA

    3 ದಿನಗಳ ಹಿಂದೆ ಕಣ್ಮರೆಯಾಗಿದ್ದ ಕಡಬದ ಯುವಕ ಶವವಾಗಿ ಪತ್ತೆ..!

    ಕಡಬ: ಮೂರು ದಿನಗಳ ಹಿಂದೆ  ಮನೆಯಿಂದ ನಾಪತ್ತೆಯಾಗಿದ್ದ ದಕ್ಷೀನ ಕನ್ನಡದ ಕಡಬದ ಯುವಕ ಶವವಾಗಿ ಪತ್ತೆಯಾಗಿದ್ದಾನೆ.  ಬಳ್ಪದ  ಈ  ಯುವಕನ ಮೃತ ದೇಹ ಬುಧವಾರ ಪಂಜದ ಹೊಳೆಯಲ್ಲಿ ಪತ್ತೆಯಾಗಿದೆ.

    ಬಳ್ಪ ಗ್ರಾಮದ ಅಕ್ಕೇಣಿಯ ಅಶೋಕ್ (33 ವ)ಎಂಬ ಯುವಕ ಮೂರು ದಿನಗಳ ಹಿಂದೆ ನಾಪತ್ತೆಯಾಗಿದ್ದರು.ಈ ಬಗ್ಗೆ ಸುಬ್ರಹ್ಮಣ್ಯ ಠಾಣೆಯಲ್ಲಿ ದೂರು ಕೂಡ ದಾಖಲಾಗಿತ್ತು. ಯುವಕನ ಪತ್ತೆಗಾಗಿ ಊರವರು, ಸಂಬಂಧಿಕರು ಹಗಲು ರಾತ್ರಿ ನಿರಂತರವಾಗಿ ಹುಡುಕಿದ್ದರು.

    ತೀವ್ರ ಶೋಧ ಕಾರ್ಯಾಚರಣೆಯ ಬಳಿಕ ಇಂದು ಪಂಜ ಹೊಳೆಯ ಪಲ್ಲೋಡಿ ಅಡ್ಕದಲ್ಲಿ ಮೃತ ದೇಹ ಪತ್ತೆಯಾಗಿದ್ದು ಬಳಿಕ ಮುಳುಗು ತಜ್ಞರನ್ನು ಸ್ಥಳಕ್ಕೆ ಕರೆಯಿಸಿ ಶವವನ್ನು ಹೊಳೆಯಿಂದ ಮೇಲಕ್ಕೆತಲಾಯಿತು.

    Share Information
    Advertisement
    Click to comment

    You must be logged in to post a comment Login

    Leave a Reply