LATEST NEWS
ಸಾಮ್ರಾಟ್ ಶಿವಾಜಿ ಮಹಾರಾಜ್ ಫಲಕಕ್ಕೆ ಹಸಿರು ಬಣ್ಣ ಎರಚಿದ ಕಿಡಿಗೇಡಿಗಳು

ಸಾಮ್ರಾಟ್ ಶಿವಾಜಿ ಮಹಾರಾಜ್ ಫಲಕಕ್ಕೆ ಹಸಿರು ಬಣ್ಣ ಎರಚಿದ ಕಿಡಿಗೇಡಿಗಳು
ಮಂಗಳೂರು ನವೆಂಬರ್ 1: ಸಾಮ್ರಾಟ್ ಶಿವಾಜಿ ಮಹಾರಾಜ್ ಫಲಕಕ್ಕೆ ಹಸಿರು ಬಣ್ಣ ಎರಚಿ, ಹಸಿರು ಬಾವುಟ ಕಟ್ಟಿ ವಿಕೃತಿ ಮೆರೆದಿರುವ ಘಟನೆ ದಕ್ಷಿಣಕನ್ನಡ ಜಿಲ್ಲೆಯ ಮಂಗಳೂರು ಹೊರವಲಯದ ಮುಡಿಪುವಿನಲ್ಲಿ ನಡೆದಿದೆ.
ಬಾಳೆಪುಣಿ ಪಂಚಾಯತ್ ವ್ಯಾಪ್ತಿಯ ಕೈರಂಗಳ ದೇವಿನಗರದ ಬಸ್ಸು ತಂಗುದಾಣದ ಶಿವಾಜಿಯ ಫಲಕಕ್ಕೆ ಕೆಲ ದಿನಗಳ ಹಿಂದೆ ಕಿಡಿಗೇಡಿಗಳು ಹಸಿರು ಬಣ್ಣ ಎರಚಿ ವಿಕೃತಿ ಮೆರೆದಿದ್ದರು.

ಇದೀಗ ನಿನ್ನೆ ರಾತ್ರಿಯೂ ಮತ್ತದೇ ವಿಕೃತಿಯನ್ನು ಕೃತ್ಯವನ್ನು ಮಾಡಿದ್ದಾರೆ. ಸದ್ಯ ಘಟನೆಯಿಂದ ಸ್ಥಳೀಯ ಹಿಂದೂ ಸಂಘಟನೆಗಳು ಆಕ್ರೋಶಿತವಾಗಿದ್ದು ಸ್ಥಳದಲ್ಲಿ ಬಿಗುವಿನ ವಾತಾವರಣ ಉಂಟಾಗಿದೆ. ಹಿರಿಯ ಪೊಲೀಸ್ ಅಧಿಕಾರಿಗಳು ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದು, ಬಿಗು ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.