KARNATAKA
ಬೆಂಗಳೂರು : ಗಗನಸಖಿಯ ಮುಟ್ಟಿ ರೇಟ್ ಕೇಳಲು ಹೋಗಿ ಕಂಬಿ ಎಣಿಸಿದ ವಿದೇಶಿ ಪ್ರಜೆ..!
ಮಾಲ್ಡೀವ್ಸ್ನಿಂದ ಬೆಂಗಳೂರಿಗೆ ಬರ್ತಿದ್ದ ಖಾಸಗಿ ವಿಮಾನಯಾನ ಸಂಸ್ಥೆಯ ವಿಮಾನದಲ್ಲಿ ಗಗನಸಖಿ ಜೊತೆ ಅಸಭ್ಯವಾಗಿ ವರ್ತಿಸಿದ ವಿದೇಶಿ ಪ್ರಜೆಯನ್ನು ಬಂಧಿಸಲಾಗಿದೆ.
ಬೆಂಗಳೂರು: ಮಾಲ್ಡೀವ್ಸ್ನಿಂದ ಬೆಂಗಳೂರಿಗೆ ಬರ್ತಿದ್ದ ಖಾಸಗಿ ವಿಮಾನಯಾನ ಸಂಸ್ಥೆಯ ವಿಮಾನದಲ್ಲಿ ಗಗನಸಖಿ ಜೊತೆ ಅಸಭ್ಯವಾಗಿ ವರ್ತಿಸಿದ ವಿದೇಶಿ ಪ್ರಜೆಯನ್ನು ಬಂಧಿಸಲಾಗಿದೆ.
ಮಾಲ್ಡೀವ್ಸ್ ಪ್ರಜೆ ವಿಮಾನದಲ್ಲಿ ಗಗನಸಖಿ ಬಳಿ ಬಿಯರ್ ಹಾಗೂ ಗೋಡಂಬಿ ಕೇಳಿದ್ದಾನೆ.
ಸರ್ವ್ ಮಾಡುವಾಗ 51 ವರ್ಷಗಳಿಂದ ನಿನ್ನಂತ ಹುಡುಗಿಯನ್ನು ಹುಡುಕುತ್ತಿದ್ದೇನೆ. ನಿನ್ನ ರೇಟ್ ಎಷ್ಟು? ಎಷ್ಟು ಡಾಲರ್ ಕೊಟ್ರೆ ನೀನು ಬರ್ತಿಯಾ ಎಂದು ಕೇಳಿದ್ದಾನೆ.
ನೂರು ಡಾಲರ್ ಕೊಟ್ರೆ ಸಾಕಾ ಇನ್ನು ಬೇಕಾ ಎಂದೆಲ್ಲಾ ಕೇಳಿದ್ದ ಈ ಕಿರಾತಕ ಅಕ್ರಂ ಅಹ್ಮದ್ (51) ನನ್ನು ದೇವನಹಳ್ಳಿ ಪೊಲೀಸರು ಬಂಧಿಸಿ ಕಂಬಿ ಎಣಿಸುವಂತೆ ಮಾಡಿದ್ದಾರೆ.
ಘಟನೆ ವಿವರ :
ಆಗಸ್ಟ್ 18 ರಂದು ಮಾಲ್ಡೀವ್ಸ್ನಿಂದ ಬೆಂಗಳೂರಿಗೆ ಬರ್ತಿದ್ದ ಖಾಸಗಿ ವಿಮಾನಯಾನ ಸಂಸ್ಥೆಯ ವಿಮಾನದಲ್ಲಿ ಘಟನೆ ನಡೆದಿದೆ.
ಆತ ಕುಳಿತಿದ್ದ ಸೀಟ್ ಬಳಿ ಬಂದ ಗಗನಸಖಿಯ ಮೈ ಮುಟ್ಟಿದ್ದಾನೆ ಅಲ್ಲದೆ ಬಿಯರ್ ಹಾಗೂ ಗೋಡಂಬಿಯ ಹಣ ಕೇಳಲು ಹೋದ ಮತ್ತೊಬ್ಬ ಗಗನಸಖಿಯ ಬಳಿಯೂ ಅಸಭ್ಯವಾಗಿ ವರ್ತಿಸಿ ಕೆಟ್ದ್ದಾಟದಾಗಿ ನಡೆದುಕೊಂಡಿದ್ದಾನೆ ಎಂದು ಆರೋಪಿಸಲಾಗಿದೆ.
ನೊಂದ ಗಗನಸಖಿ ಈ ಬಗ್ಗೆ ದೂರು ನೀಡಿದ್ದು ದೇವನಹಳ್ಳಿ ಇಂಟರ್ ನ್ಯಾಷನಲ್ ಏರ್ಪೋರ್ಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಾಲ್ಡೀವ್ಸ್ನ ಮಾಲೆಯಿಂದ ಬ್ಯುಸಿನೆಸ್ ಕ್ಲಾಸ್ನಲ್ಲಿ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಪ್ರಯಾಣ ಮಾಡಿದ್ದ ಈತನನ್ನು ದೇವನಹಳ್ಳಿ ಏರ್ಪೋರ್ಟ್ ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದ್ದಾರೆ.
You must be logged in to post a comment Login