Connect with us

LATEST NEWS

ಮಂಗಳೂರು – ನೇಣಿಗೆ ಶರಣಾದ ಬೀದರ್ ಮೂಲದ ಯುವ ವೈದ್ಯೆ

ಮಂಗಳೂರು ಡಿಸೆಂಬರ್ 20: ಮಂಗಳೂರಿನ ಖಾಸಗಿ ವೈದ್ಯಕೀಯ ಕಾಲೇಜಿನಲ್ಲಿ ಇಂಟರ್ನ್ ಷಿಪ್ ಮಾಡುತ್ತಿದ್ದ ಎಂಬಿಬಿಎಸ್ ವಿಧ್ಯಾರ್ಥಿನಿಯೊಬ್ಬಳು ನೇಣು ಬಿಗಿದು ಆತ್ಮಹತ್ಯೆಗೆ ಶರಣಾಗಿದ್ದಾರೆ.

ಬೀದರ್‌ನ ಆನಂದ ನಗರದ ವಿಜಯಕುಮಾರ್ ಗಾಯಕವಾಡ್ ಪುತ್ರಿ ವೈಶಾಲಿ ಗಾಯಕ್‌ವಾಡ್ (25) ಮೃತ ವಿದ್ಯಾರ್ಥಿನಿ. ಭಾನುವಾರ ಸಂಜೆ ಕುತ್ತಾರ್‌ನಲ್ಲಿ ತಾವು ವಾಸಿಸುತ್ತಿದ್ದ ಅಪಾರ್ಟ್‌ಮೆಂಟ್‌ನಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲವಾದರೂ ವೈಯಕ್ತಿಕ ಕಾರಣಗಳ ಬಗ್ಗೆ ಪೊಲೀಸರು ಶಂಕಿಸಿದ್ದಾರೆ. ಗೆಳತಿ ಜೊತೆ ಅಪಾರ್ಟ್‌ಮೆಂಟ್‌ನಲ್ಲಿ ವಾಸಿಸುತ್ತಿದ್ದ ವೈಶಾಲಿ ಅವರು ಭಾನುವಾರ ಸಂಜೆ ಕೋಣೆಯಲ್ಲಿ ನೇಣಿಗೆ ಶರಣಾಗಿದ್ದಾರೆ.

ಎಂಬಿಬಿಎಸ್ ಕಲಿಯುತ್ತಿದ್ದ ಕೇರಳದ ಪಾಲಕ್ಕಾಡ್ ನಿವಾಸಿ ಸುಜೀಶ್ ಎಂಬಾತನನ್ನು ವೈಶಾಲಿ ಪ್ರೀ ತಿಸುತ್ತಿದ್ದರು. ಆದರೆ ಈಚೆಗೆ ವೈಶಾಲಿ ಹಾಗೂ ಸುಜೀತ್ ನಡುವೆ ವೈಮನಸ್ಸು ಉಂಟಾಗಿತ್ತು ಎನ್ನಲಾಗಿದೆ. ಇದರಿಂದ ನೊಂದು ಇಂಥದ್ದೊಂದು ಭಯಾನಕ ಹೆಜ್ಜೆ ಇಟ್ಟಿದ್ದಾರೆ ಯುವವೈದ್ಯೆ. ಪ್ರಿಯಕರ ಸುಜೀತ್ನನ್ನು ವಶಕ್ಕೆ ಪಡೆದಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಘಟನೆ ಕುರಿತು ಉಳ್ಳಾ ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *