Connect with us

LATEST NEWS

ಹಲ್ಲೆ ಆರೋಪ ಬಿಜೆಪಿಯ ಪಿತೂರಿ – ಮೇಯರ್ ಕವಿತಾ ಸನಿಲ್

ಹಲ್ಲೆ ಆರೋಪ ಬಿಜೆಪಿಯ ಪಿತೂರಿ – ಮೇಯರ್ ಕವಿತಾ ಸನಿಲ್

ಮಂಗಳೂರು ಅಕ್ಟೋಬರ್ 27: ವಾಚ್ ಮೆನ್ ಪತ್ನಿ ಮೇಲೆ ಹಲ್ಲೆ ನಡೆಸಿದ್ದೇನೆ ಎನ್ನುವುದು ಶುದ್ದ ಸುಳ್ಳು ಎಂದು ಮಂಗಳೂರು ಮೇಯರ್ ಕವಿತಾ ಸನಿಲ್ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಬಿಜೆಪಿಯ ಸದಸ್ಯೆಯ ಕುಮ್ಮಕ್ಕಿನಿಂದ ನನ್ನ ವಿರುದ್ದ ಸುಳ್ಳು ಆರೋಪ ಹೊರಿಸಲಾಗುತ್ತಿದೆ ಎಂದು ಹೇಳಿದರು.

ದೀಪಾವಳಿ ಸಂದರ್ಭದಲ್ಲಿ ನಾನು ಮನೆಯಲ್ಲಿರಲಿಲ್ಲ ಮಕ್ಕಳು ಪಟಾಕಿ ಸಿಡಿಸುವ ವೇಳೆ ಬಿಸಿ ನಕ್ಷತ್ರ ಕಡ್ಡಿಯನ್ನು ವಾಚ್ ಮೆನ್ ಮಗ ನನ್ನ ಮಗಳ ಕಾಲಿಗೆ ಎಸೆದಿದ್ದಾನೆ. ಅದಕ್ಕಾಗಿ ನನ್ನ ಮಗಳು ಅವನ ಶರ್ಟ್ ಎಳೆದು ತಳ್ಳಿದ್ದಾಳೆ. ಆದರೆ ವಾಚ್ ಮೆನ್ ನ ಪತ್ನಿ ಇದನ್ನು ಕಂಡು ನನ್ನ ಮಗಳನ್ನು ನಡು ರಸ್ತೆಯಲ್ಲಿ ಓಡಿಸಿರುವುದು ಸಿಸಿಟಿವಿಯಲ್ಲಿ ದಾಖಲಾಗಿದೆ ಎಂದರು.

ಈ ವಿಚಾರ ತಿಳಿದ ನಾನು ಅವರಲ್ಲಿಗೆ ಹೋಗಿ ನಿಮ್ಮ ವಿರುದ್ದ ಪೊಲೀಸರಿಗೆ ದೂರು ನೀಡುತ್ತೇನೆ ಎಂದು ಹೇಳಿದ್ದೆ ವಿನಾ ಅವರ ಮೇಲೆ ಹಲ್ಲೆ ನಡೆಸಿಲ್ಲ. ನಾನು ಹಲ್ಲೆ ನಡೆಸಿ, ಎಳೆದಾಡಿದ್ದರೆ ನಾನು ಹೋದ ಕೆಲವೇ ನಿಮಿಷಗಳಲ್ಲಿ ಅವರು ಆರಾಮವಾಗಿರುವುದು ಸಿಸಿಟಿವಿ ದೃಶ್ಯಾವಳಿಯಲ್ಲಿದೆ. ಈ ಹಿನ್ನಲೆಯಲ್ಲಿ ಇದೆಲ್ಲದರ ವಿರುದ್ದ ಪೊಲೀಸರಿಗೆ ದೂರು ನೀಡುತ್ತೇನೆ ಎಂದು ತಿಳಿಸಿದ್ದಾರೆ.

ಬಿಜೆಪಿಯ ಮನಪಾ ಸದಸ್ಯೆ ರೂಪಾ ಡಿ ಬಂಗೇರಾ ಹಾಗೂ ಬಿಜೆಪಿ ಮಹಿಳಾ ಮೋರ್ಚಾದ ಪೂಜಾ ಪೈ ವಾಚ್ ಮೆನ್ ದಂಪತಿಗಳನ್ನು ಭೇಟಿಯಾಗಿ 35 ನಿಮಿಷಗಳ ಕಾಲ ಮಾತುಕತೆಯಲ್ಲಿ ತೊಡಗಿರುವುದು ಸಿಸಿಟಿವಿಯಲ್ಲಿದೆ, ಆ ಬಳಿಕ ಅವರನ್ನು ಬಿಜೆಪಿ ಕಚೇರಿಗೆ ಕರೆಸಿಕೊಂಡಿದ್ದಾರೆ ಎನ್ನುವುದಕ್ಕೆ ನನ್ನ ಬಳಿ ಆಧಾರವಿದೆ ಎಂದು ಹೇಳಿದ ಅವರು , ನಂತರ ವಾಚ್ ಮೆನ್ ಹೆಂಡತಿ ಬಾಯಿಯಿಂದ ಸುಳ್ಳು ಆರೋಪ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಯ ಬಿಡಲಾಗಿದೆ ಎಂದರು. ನಾನು ಮಾಡುವ ಅಭಿವೃದ್ಧಿ ಕೆಲಸವನ್ನು ಸಹಿಸಲಾಗದೆ ಇವರ ಮೂಲಕ ಸಂಚು ಮಾಡಿದ್ದಾರೆ ಎಂದು ಮೇಯರ್ ಕವಿತಾ ಸನಿಲ್ ಹೇಳಿದ್ದಾರೆ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *