Connect with us

    DAKSHINA KANNADA

    ಮಸೂದ್‌ ಕೊಲೆ ಪ್ರಕರಣ-ಆರೋಪಿಗಳಿಗೆ ಆ.29ರವರೆಗೆ ನ್ಯಾಯಾಂಗ ಬಂಧನ

    ಸುಳ್ಯ, ಆಗಸ್ಟ್ 17: ಸುಳ್ಯದ ಬೆಳ್ಳಾರೆ ಪೊಲೀಸ್‌ ಠಾಣೆ ವ್ಯಾಪ್ತಿಯ ಕಳೆಂಜದ ಮಸೂದ್‌ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಬಂಧಿತರಾಗಿರುವ ಎಲ್ಲಾ ಆರೋಪಿಗಳಿಗೆ ನ್ಯಾಯಾಂಗ ಬಂಧನವನ್ನು ಆಗಸ್ಟ್‌ 29 ರ ತನಕ ವಿಸ್ತರಿಸಲಾಗಿದೆ.

    ಮಸೂದ್‌ ಅವರು ಜುಲೈ 19 ರಂದು ಗುಂಪು ಹಲ್ಲೆಗೊಳಗಾಗಿ ಜುಲೈ 21 ರಂದು ಸಾವನ್ನಪ್ಪಿದ್ದರು. ಈ ಕುರಿತಂತೆ 8 ಮಂದಿ ಆರೋಪಿಗಳಾದ ಅಭಿಲಾಷ್‌, ಸುನಿಲ್‌ ಕೆ., ಸುಧೀರ್‌, ಶಿವ ಪ್ರಸಾದ್‌, ರಂಜಿತ್‌ ಬಿ., ಸದಾಶಿವ ಪೂಜಾರಿ, ರಂಜಿತ್‌, ಭಾಸ್ಕರ ಕೆ. ಎಂ. ಅವರನ್ನು ಪೊಲೀಸರು ಜುಲೈ 20 ರಂದು ದಸ್ತಗಿರಿ ಮಾಡಿದ್ದರು.

    ಬಳಿಕ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದರು. ಅವರ ನ್ಯಾಯಾಂಗ ಬಂಧನದ ಅವಧಿ ಆಗಸ್ಟ್‌ 16 ರಂದು ಮುಕ್ತಾಯಗೊಂಡಿತ್ತು. ಈ ಹಿನ್ನೆಲೆಯಲ್ಲಿ ಅವರನ್ನು ನಿನ್ನೆ ಪುನಃ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿತ್ತು. ನ್ಯಾಯಾಲಯವು ಆಗಸ್ಟ್‌ 29 ರ ತನಕ ನ್ಯಾಯಾಂಗ ಬಂಧನವನ್ನು ವಿಸ್ತರಿಸಿ ಆದೇಶಿಸಿದೆ.

    Share Information
    Advertisement
    Click to comment

    You must be logged in to post a comment Login

    Leave a Reply