LATEST NEWS
ಜನಪ್ರತಿನಿಧಿಯಾದವರು ಪೊಲೀಸರ ಕಾಲರ್ ಏಳಿತೇವೆ ಎಂಬ ಮಟ್ಟಕ್ಕೆ ಹೋದ್ರೆ ಪೊಲೀಸರ ಕೈಯಲ್ಲಿ ಬೇಡಿ ಇರಲ್ವಾ – ಮಂಜುನಾಥ್ ಭಂಡಾರಿ
ಮಂಗಳೂರು ಜೂನ್ 01 : ಬೆಳ್ತಂಗಡಿ ಬಿಜೆಪಿ ಶಾಸಕ ಹರೀಶ್ ಪೂಂಜಾ ಪೊಲೀಸ್ ಠಾಣೆಯಲ್ಲಿ ಗಲಾಟೆ ವಿಚಾರಕ್ಕೆ ಹೈಕೋರ್ಟ್ ಚಾಟೀ ಬೀಸಿದ್ದು, ಪೊಲೀಸರು ಹರೀಶ್ ಪೂಂಜಾ ಅವರನ್ನು ಆವತ್ತೇ ಅರೆಸ್ಟ್ ಮಾಡಬೇಕಿತ್ತು ಎಂದು ಮಂಗಳೂರಿನಲ್ಲಿ ಕೆ.ಪಿ.ಸಿ.ಸಿ ಕಾರ್ಯಾಧ್ಯಕ್ಷ ಮಂಜುನಾಥ್ ಭಂಡಾರಿ ಹೇಳಿದ್ದಾರೆ.
ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು ಹರೀಶ್ ಪೂಂಜಾ ಅವರಿಗೆ ಪೊಲೀಸರು ಅಂದು ಮೃದು ಧೋರಣೆ ತೋರಿದ್ದರು, ಶಾಸಕ ಹರೀಶ್ ಪೂಂಜಾ ಅವರನ್ನು ಅವತ್ತೇ ಬಂಧನ ಮಾಡಬೇಕಿತ್ತು, ಬಂಧನ ಮಾಡದೇ ಇದ್ರೆ ಮುಂದಿನ ದಿನ ಇದು ಹಳಿ ತಪ್ಪುತ್ತೆ, ರಾಜಕಾರಣಿಗಳೇ ಕಾನೂನಿಗೆ ಗೌರವ ನೀಡದಿದ್ರೆ ನಾವು ಜನರಿಂದ ಏನು ನಿರೀಕ್ಷೆ ಮಾಡಬಹುದು ಎಂದರು.
ಹರೀಶ್ ಪೂಂಜಾ ಮಾತನಾಡಿರುವ ಮಾತು ಎಂತವರನ್ನು ಕೆರಳಿಸುತ್ತೆ, ಜನಪ್ರತಿನಿಧಿಯಾದಂತವರು ಪೊಲೀಸರ ಕಾಲರ್ ಏಳಿತೇವೆ ಎಂಬ ಮಟ್ಟಕ್ಕೆ ಹೋದ್ರೆ ಪೊಲೀಸರ ಕೈಯಲ್ಲಿ ಬೇಡಿ ಇರಲ್ವಾ, ಇವರ ಕೈಯಲ್ಲಿ ಕಾಲರ್ ಬಂದಾಗ ಅವರ ಕೈಯಲ್ಲಿ ಬೇಡಿ ಇರಲ್ವಾ ಎಂದ ಅವರು ಮಾತನಾಡುವಾಗ ಯೋಚನೆ ಮಾಡಿ ಮಾತನಾಡಬೇಕಿತ್ತು ಎಂದರು. ಮಂಗಳೂರು ರಸ್ತೆಯಲ್ಲೇ ನಮಾಝ್ ಮಾಡಿದ ಪ್ರಕರಣದಲ್ಲಿ ಪೊಲೀಸರು ತರಾತುರಿ ಮಾಡಿದ್ದಾರೆ. ಮಸೀದಿಯವರು ಮುಚ್ಚಳಿಕೆ ಬರೆದು ಕೊಟ್ಟಿದ್ದರು ಕೂಡ ಸುಮೋಟೋ ಕೇಸ್ ಹಾಕಿದ್ದರು. ಯಾವ ಆಧಾರದಲ್ಲಿ ಸುಮೋಟೊ ಕೇಸ್ ಹಾಕಿದ್ದಾರೆ ಎಂದು ಮಸೀದಿಯವರಿಗೆ ಗೊತ್ತಿರಲಿಲ್ಲ, ನಮ್ಮ ಗಮನಕ್ಕೆ ಬಂದಾಗ ಸಂಬಂದ ಪಟ್ಟ ಅಧಿಕಾರಿಗಳ ಜೊತೆ ಮಾತನಾಡಿದ್ವಿ, ಯಾರು ಮಾಡಿದ್ದಾರೆ ಏನು ಮಾಡಿದ್ದಾರೆ ಎಂಬ ಪೂರ್ಣ ಮಾಹಿತಿ ಪೊಲೀಸರ ಬಳಿ ಇರಲಿಲ್ಲ ಎಂದರು.
You must be logged in to post a comment Login