Connect with us

    DAKSHINA KANNADA

    ಮಂಗಳೂರು: ಬಿರು ಮಳೆ ಮಧ್ಯೆ ಮನೆಗೆ ಕನ್ನ,ಲಕ್ಷಾಂತರ ಮೌಲ್ಯದ ನಗ ನಗದು ಕಳ್ಳರ ಪಾಲು..!

    ಮಂಗಳೂರು: ಸುರಿಯುತ್ತಿರುವ ಭಾರಿ ಮಳೆ ಕಳ್ಳಕಾಕರಿಗೆ ವರದಾನವಾಗಿದ್ದು ಕಳ್ಳತನ ಪ್ರಕರಣಗಳು ಹೆಚ್ಚಾಗುತ್ತಿವೆ. ಇದೇ ಮಳೆ ಲಾಭ ಪಡೆದ ಕಳ್ಳರು ಮಂಗಳೂರು ಹೊರವಲಯದ ಮನೆಯೊಂದಕ್ಕೆ ಕನ್ನ ಹಾಕಿ ಲಕ್ಷಾಂತರ ಮೌಲ್ಯದ ನಗ ನಗದು ಕಳವು ಮಾಡಿದ್ದಾರೆ.

    ಮಂಗಳೂರು ಪೊಲೀಸ್ ಕಮಿಷನರೇಟ್ ನ ಮುಲ್ಕಿ ಪೊಲೀಸ್ ಠಾಣಾ ವ್ಯಾಪ್ತಿಯ ಬಳ್ಕುಂಜೆ ನೀರಳಿಕೆ ಎಂಬಲ್ಲಿ ಈ ಪ್ರಕರಣ ಬೆಳಕಿಗೆ ಬಂದಿದೆ. ಈ ಬಗ್ಗೆ ಮನೆ ಮಾಲಿಕ ಶೇಖಬ್ಬ ಮುಲ್ಕಿ ಪೊಲೀಸ್ ಠಾಣೇಯಲ್ಲಿ ದೂರು ದಾಖಲು ಮಾಡಿದ್ದಾರೆ. ಗುರುವಾರ ಬೆಳಗ್ಗಿನ ಜಾವ 4.30ರ ಸುಮಾರಿಗೆ ಈ ಕೃತ್ಯ ನಡೆದಿದ್ದು ಶೇಖಬ್ಬ ಅವರ ಅಳಿಯ ರಾತ್ರಿ 1.00 ಗಂಟೆ ಸುಮಾರಿಗೆ ಕರೆ ಮಾಡಿದ್ದಾರೆ. ಕರೆ ಸ್ವೀಕರಿಸಿ ಶೇಖಬ್ಬ ಪತ್ನಿ ಮತ್ತು ಮಕ್ಕಳು ರಾತ್ರಿ ಮಲಗಿದ್ದರು. ಮುಂಜಾನೆ 4.30ಕ್ಕೆ ಶೇಖಬ್ಬ ಅವರ ಮಗಳು ಶೌಚಾಲಯಕ್ಕೆ ಹೋಗಲು ಏಳುವಾಗ ಕಳ್ಳತನ ಆದದ್ದು ಗಮನಕ್ಕೆ ಬಂದಿದೆ. ಮನೆ ಮಂದಿ ಮನೆಯ ಚಾವಡಿಯಲ್ಲಿ ಮಲಗಿದ್ದು, ಮನೆಯ ಮುಂಭಾಗದ ಚಿಲಕ ಹಾಕಿ ಹಿಂಬಾಗಿಲಿನ ಬಾಗಿಲ ಒಳಭಾಗದ ಚಿಲಕವನ್ನು ರಾಡ್‌ನಿಂದ ಒಡೆದು ಕಳ್ಳರು ಒಳನುಗ್ಗಿದ್ದಾರೆ. ಮನೆಯಲ್ಲಿ ಜಾಲಾಡಿ, ಹಾಸಿಗೆಯ ಅಡಿಯಲ್ಲಿ ಇರಿಸಿದ್ದ ಕಪಾಟಿನ ಕೀಲಿಕೈ ಬಳಸಿ ಕಪಾಟಿನ ಬೀಗ ತೆಗೆದು ಕಪಾಟನ್ನು ಜಾಲಾಡಿ ಸುಮಾರು 2 ಲಕ್ಷ ರೂ. ಮೌಲ್ಯದ ಚಿನ್ನ ಮತ್ತು ಸುಮಾರು 5,000 ರೂ. ನಗದು ದೋಚಿದ್ದಾರೆ. ಸ್ಥಳಕ್ಕೆ ಬೆರಳಚ್ಚು ತಜ್ಞರು, ಶ್ವಾನ ದಳ, ಮೂಲ್ಕಿ ಪೊಲೀಸ್ ಇನ್‌ಸ್ಪೆಕ್ಟರ್ ವಿದ್ಯಾಧರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply