Connect with us

LATEST NEWS

ಮಂಗಳೂರು : ಸುರತ್ಕಲ್‌ ಹಲ್ಲೆ ಪ್ರಕರಣ- ಮೂರನೇ ಆರೋಪಿಯ ಬಂಧನ..!

ಸುರತ್ಕಲ್‌ ನಲ್ಲಿ ನಡೆದ ಹಲ್ಲೆಗೆ ಸಂಬಂಧಿಸಿದ ಪ್ರಕರಣದಲ್ಲಿ ಮೂರನೇ ಆರೋಪಿಯನ್ನು ಮಂಗಳೂರಿನ ಸುರತ್ಕಲ್ ಪೊಲೀಸರು ಬಂಧಿಸಿದ್ದಾರೆ.

ಮಂಗಳೂರು : ಸುರತ್ಕಲ್‌ ನಲ್ಲಿ ನಡೆದ ಹಲ್ಲೆಗೆ ಸಂಬಂಧಿಸಿದ ಪ್ರಕರಣದಲ್ಲಿ ಮೂರನೇ ಆರೋಪಿಯನ್ನು ಮಂಗಳೂರಿನ ಸುರತ್ಕಲ್ ಪೊಲೀಸರು ಬಂಧಿಸಿದ್ದಾರೆ.

ಸುರತ್ಕಲ್ ಇಡ್ಯಾ ಗ್ರಾಮದ ಆಶ್ರಯ ಕಾಲನಿಯ ಚೆನ್ನಪ್ಪ @ಮುತ್ತು (18) ಬಂಧಿತ ಆರೋಪಿಯಾಗಿದ್ದಾನೆ.

ಈತನ ಮೇಲೆ ಈಗಾಗಲೇ ಜನತಾ ಕಾಲನಿಯ ಜುಮ್ಮಾ ಮಸೀದಿಗೆ ಕಲ್ಲು ಬಿಸಾಡಿ ಹಾನಿ ಮಾಡಿದ ಹಾಗೂ ಮಂಗಳೂರು ನಗರದ ಕದ್ರಿ ಪೊಲೀಸ್ ಠಾಣೆಯಲ್ಲಿ ಬಸ್ಸಿನಲ್ಲಿ ಸಂಚರಿಸುತ್ತಿದ್ದ ಮುಸ್ಲೀಂ ವಿದ್ಯಾರ್ಥಿ ಮೇಲೆ ಹಲ್ಲೆ ನಡೆಸಿದ ಪ್ರಕರಣಗಳು ದಾಖಲಾಗಿವೆ.

ಈಗಾಗಲೇ ಪ್ರಕರಣದ ಇಬ್ಬರು ಆರೋಪಿಗಳಾದ ಪ್ರಶಾಂತ್ ಭಂಡಾರಿಮತ್ತು ಬಸವರಾಜನನ್ನು ಪೊಲೀಸರು ಬಂಧಿಸಿದ್ದು ನ್ಯಾಯಾಂಗ ಬಂಧನದಲ್ಲಿದ್ದಾರೆ.

ಜುಲೈ 16 ಈ ಘಟನೆ ನಡೆದಿದ್ದು ರೋಜರ್ ಡಿಕೋಸ್ಟಾ ಎಂಬವರು ತನ್ನಪರಿಚಯದ ಜಾರ್ಖಂಡ್ ನಿವಾಸಿ ವಾಸಿ ಸಾಹಿಲ್ ಜೊತೆ ಮಳೆ ಬಂದ ಕಾರಣ ಸುರತ್ಕಲ್ ಜನತಾ ಕಾಲನಿಯ ಪಾಳು ಬಿದ್ದ ಮನೆ ಬಳಿ ನಿಂತುಕೊಂಡಿದ್ದರು.

ಈ ಸಂದರ್ಭ ಆರೋಪಿಗಳಾದ ಪ್ರಶಾಂತ್ ಭಂಡಾರಿ ಮತ್ತು ತಂಡ ಇವರ ಮೇಲೆ ದಾಳಿ ನಡೆಸಿತ್ತು.

Share Information
Continue Reading
Advertisement
Click to comment

Leave a Reply

Your email address will not be published. Required fields are marked *