DAKSHINA KANNADA
ಮಂಗಳೂರು ಸಮುದ್ರ ವಿಹಾರಕ್ಕೆ ಬಂದವರಲ್ಲಿ ಸಮುದ್ರಪಾಲು : ಇಬ್ಬರ ರಕ್ಷಣೆ…!!
ಮಂಗಳೂರು ಮಲ್ಲಮಾರ್ ಸಮುದ್ರ ವಿಹಾರಕ್ಕೆ ಬಂದ ಮೂವರ ಪೈಕಿ ಒರ್ವ ಸಮುದ್ರಪಾಲಗಿದ್ದು ಇಬ್ಬರನ್ನು ಸ್ಥಳೀಯರು ರಕ್ಷಿಸಿದ ಘಟನೆ ಸಂಭವಿಸಿದೆ.
ಮಂಗಳೂರು : ಮಂಗಳೂರು ಮಲ್ಲಮಾರ್ ಸಮುದ್ರ ವಿಹಾರಕ್ಕೆ ಬಂದ ಮೂವರ ಪೈಕಿ ಒರ್ವ ಸಮುದ್ರಪಾಲಗಿದ್ದು ಇಬ್ಬರನ್ನು ಸ್ಥಳೀಯರು ರಕ್ಷಿಸಿದ ಘಟನೆ ಸಂಭವಿಸಿದೆ.
ಸಮುದ್ರ ಪಾಲಾದ ವ್ಯಕ್ತಿ ಬಾಗಲಕೋಟೆ ನಿವಾಸಿ ಮಾಂತೇಶ್(29) ಎಂದು ತಿಳಿದು ಬಂದಿದೆ. ಸ್ನೇಹಿತರ ಜೊತೆಗೆ ವಿಹಾರಕ್ಕೆ ಬಂದಿದ್ದರು ಎನ್ನಲಾಗಿದೆ.
ಅಕ್ಕ ಸಾವಿತ್ರಿಗೆ ಕೆಲಸಕ್ಕೆ ಹೋಗುವುದಾಗಿ ತಿಳಿಸಿ ಕೆಲಸಕ್ಕೆ ಹೋಗದೆ ವಿಹಾರಕ್ಕಾಗಿ ಬಂದಿದ್ದಾಗ ಈ ಘಟನೆ ನಡೆದಿದೆ.
ಸ್ನೇಹಿತ ಮಹಾಂತೇಶ್ ವಿಜಯಪುರ ರಕ್ಷಿಸಿ ಹಿಂದೆ ಎಳೆದು ತರುತ್ತಿದ್ದಾಗ ಮತ್ತೆ ಅಲೆಯ ಹೊಡೆತಕ್ಕೆ ಸಿಲುಕಿ ಮುಳುಗಿ ನಾಪತ್ತೆಯಾಗಿದ್ದಾನೆ.
ಸುರತ್ಕಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
You must be logged in to post a comment Login