Connect with us

DAKSHINA KANNADA

ಮಂಗಳೂರು : ಕಮ್ಯುನಿಸ್ಟರಿಂದ ಕರಾವಳಿಯಲ್ಲಿ ಹಿಂದೂಗಳನ್ನು ಟಾರ್ಗೆಟ್ ಮಾಡಲು ‘ಇಸ್ಲಾಮಿಕ್ ಜಿಹಾದಿಗಳ ಮ್ಯಾನ್ ಪವರ್, ಕ್ರಿಶ್ಚಿಯನ್ ಮನಿ ಪವರ್ ಬಳಕೆ ; ಹಿಂದೂ ಜಾಗರಣ ವೇದಿಕೆ ಆರೋಪ

ಮಂಗಳೂರು :  ಸಾಹಿತಿ, ಪ್ರಾಧ್ಯಾಪಕ ಅರುಣ್ ಉಳ್ಳಾಲ್ ಅವರ ಮೇಲೆ  FIR ಮಾಡಿದ ಮಂಗಳೂರು ಪೊಲೀಸರ ಕ್ರಮವನ್ನು ಹಿಂದೂ ಜಾಗರಣ ವೇದಿಕೆ ತೀವ್ರವಾಗಿ ಖಂಡಿಸಿದ್ದು ಅರುಣ್ ಉಳ್ಳಾಲ್ ಅವರ ನೆರವಿಗೆ ಸಂಘಟನೆ ಯಾವೋತ್ತು ಬೆಂಬಲವಾಗಿ ನಿಲ್ಲುತ್ತೆ ಎಂದು ಹಿಂದೂ ಜಾಗರಣಾ ವೇದಿಕೆಯ  ಮುಖಂಡ ಶ್ರೀಕಾಂತ್ ಶೆಟ್ಟಿ ಕಾರ್ಕಳ ಹೇಳಿದ್ದಾರೆ.

ಮಂಗಳೂರಿನಲ್ಲಿ ಕರೆದ ಸುದ್ದಿಗೋಷ್ಟಿಯಲ್ಲಿ ಶ್ರೀಕಾಂತ್ ಶೆಟ್ಟಿ ಅವರು ಮಾತನಾಡಿದರು. ಸಜ್ಜನರಾಗಿರುವ ಅರುಣ್ ಉಳ್ಳಾಲ್ ಅವರನ್ನು ವ್ಯವಸ್ಥಿತವಾಗಿ ಟಾರ್ಗೆಟ್ ಮಾಡಲಾಗುತ್ತಿದೆ. ಪೊಲೀಸರು ಹಿಂದೆ ಮುಂದೆ ನೋಡದೆ ಪರಾಮರ್ಶೆ ನಡೆಸದೆ FIR  ದಾಖಲು ಮಾಡಿರುವುದನ್ನು ಹಿಂದೂ ಜಾಗರಣಾ ವೇದಿಕೆ ತೀವ್ರವಾಗಿ ಖಂಡಿಸುತ್ತದೆ. ಹಿಂದೂಪರವಾಗಿ ಯಾರೆಲ್ಲಾ ಕೆಲಸ ಮಾಡುತ್ತಾರೋ ಅವರ  ವಿರುದ್ಧ ಒಂದು ಎಡಪಂತೀಯರ ಜಾಲ ಮಂಗಳೂರಿನಲ್ಲಿ ವ್ಯವಸ್ಥಿತವಾಗಿ ಕಾರ್ಯ ನಿರ್ವಹಿಸುತ್ತಿದೆ ಎಂದು ಆರೋಪಿಸಿದರು. ಅರುಣ್ ಉಳ್ಳಾಲ್ ನೂರಾರು ಮಕ್ಕಳಿಗೆ ಧರ್ಮ ಶಿಕ್ಷಣ, ಸಾವಿರಾರು ಜನರಿಗೆ  ಉಪದೇಶ ನೀಡುವ ಮೂಲಕ ಸಾಮಾಜಿಕ ಬದಲಾವಣೆಗೆ ಪ್ರಯತ್ನ ಮಾಡುತ್ತಿದ್ದಾರೆ. ಇದು ಇಲ್ಲಿನ ಕೆಲವರಿಗೆ ಸಹಿಸಲಸಾಧ್ಯವಾಗಿದ್ದು ಇದಕ್ಕಾಗಿ ಅರುಣ್ ಉಳ್ಳಾಲ್ ಟಾರ್ಗೆಟ್ ಆಗಿದ್ದಾರೆ. ಹಿಂದೂ ಪರ ಸಂಘಟನೆಗಳು ಇದನ್ನು‌ ನೋಡಿಕೊಂಡು ಸುಮ್ಮನೆ ಕೂರಲ್ಲ ಬೀದಿಗಿಳಿದು ಹೋರಾಟ ಮಾಡುತ್ತೇವೆ ಜೊತೆಗೆ  ಅರುಣ್ ಉಳ್ಳಾಲ್ ಸದಾ ಬೆಂಗಾವಲಾಗಿ ನಿಲ್ಲಲಿದ್ದು  ಅವರಿಗೆ ಅಗತ್ಯಬಿದ್ದರೆ  ಕಾನೂನು ನೆರವು ಸಹ ನೀಡುತ್ತೇವೆ ಎಂದರು.

ಅರುಣ್ ಉಳ್ಳಾಲ್ ಖಾಸಗಿ ಸಭೆಯಲ್ಲಿ ಈ  ಹೇಳಿಕೆ ನೀಡಿದ್ದು, ಆ ಒಂದು ಸಣ್ಣ ವಿಡಿಯೋ ತುಣುಕನ್ನು ಮುಂದಿಟ್ಟು ಅರುಣ್ ಉಳ್ಳಾಲ್ ಮೇಲೆ ಸುಮೊಟೊ ಕೇಸ್ ದಾಖಲು ಮಾಡಿರುವ ಪೊಲೀಸರು ತಾಕತ್ ಇದ್ರೆ ರಾಜಭವನಕ್ಕೆ ಬಾಂಗ್ಲಾ ಮಾದರಿಯ ಮುತ್ತಿಗೆಯ ಬೆದರಿಕೆ ಹಾಕಿದ್ದ ಎಂ ಎಲ್ ಸಿ ಐವನ್ ಡಿಸೋಜಾ ವಿರುದ್ಧ ಪ್ರಕರಣ ದಾಖಲು ಮಾಡಲಿ ಎಂದು ಸವಾಲು ಹಾಕಿದರು.  ಮದ್ರಸ ಮಸೀದಿಗಳ ಒಳಗಡೆ  ಏನು ನಡೆಯುತ್ತೆ ಎಂದು ನಾವು ನೋಡಲು ಹೋಗಿಲ್ಲ. ಅರುಣ್ ಉಳ್ಳಾಲ್  ಖಾಸಾಗಿ ಸಭೆಯಲ್ಲಿ ಮಾಡಿದ ಹೇಳಿಕೆ ಇದಾಗಿದ್ದು ಇದು ಆಂತರಿಕ ವಿಚಾರವಾಗಿದೆ ಆದ್ದರಿಂದ ಪೊಲೀಸರು ಕೂಡಲೇ ಪ್ರಕರಣ ಹಿಂಪಡೆಯಬೇಕು. ಪ್ರಕರಣ ವಾಪಾಸು ಪಡೆದುಕೊಂಡ್ರೆ ಇದು ಸುಖಾಂತ್ಯ ಆಗುತ್ತೆಇಲ್ಲವಾದಲ್ಲಿ ಹಿಂದೂ ಪರ ಸಂಘಟನೆಗಳು ಇದನ್ನು‌ ನೋಡಿಕೊಂಡು ಸುಮ್ಮನೆ ಕೂರಲ್ಲ ಬೀದಿಗಿಳಿದು ಹೋರಾಟ ಮಾಡುತ್ತೇವೆ ಎಂದು ಎಚ್ಚರಿಸಿದರು.

 

Share Information
Continue Reading
Advertisement
Click to comment

Leave a Reply

Your email address will not be published. Required fields are marked *