Connect with us

LATEST NEWS

ಮಂಗಳೂರು : ಬಡವರ ಪಾಲಿನ ದೇವರು ಡಾ.ಬಿ ಕೆ ವಿಶ್ವನಾಥ್ ನಿಧನ..!

ಬಡವರ ಪಾಲಿನ ದೇವರೆಂದೇ ಖ್ಯಾತರಾಗಿದ್ದ ಮಂಗಳೂರಿನ ಹಿರಿಯ ವೈದ್ಯ ಡಾ, ಬಿ ಕೆ , ವಿಶ್ವನಾಥ್ ಅವರು ನಿಧನರಾಗಿದ್ದಾರೆ.

ಮಂಗಳೂರು : ಬಡವರ ಪಾಲಿನ ದೇವರೆಂದೇ ಖ್ಯಾತರಾಗಿದ್ದ ಮಂಗಳೂರಿನ ಹಿರಿಯ ವೈದ್ಯ ಡಾ, ಬಿ ಕೆ , ವಿಶ್ವನಾಥ್ ಅವರು ನಿಧನರಾಗಿದ್ದಾರೆ.

82 ವರ್ಷದ ಡಾ. ವಿಶ್ವನಾಥ್ ಅವರು ಹೃದಯಾಘಾತದಿಂದ ನಿಧನ ಹೊಂದಿದ್ದಾರೆ ಎಂದು ಅವರ ಕುಟುಂಬ ಮೂಲಗಳು ತಿಳಿಸಿವೆ.  ಮಂಗಳೂರು ನಗರದ ಕೊಟ್ಟರದಲ್ಲಿ ಕ್ಲಿನಿಕ್ ನಡೆಸುತ್ತಿದ್ದ ಡಾ. ಬಿ ಕೆ ವಿಶ್ವನಾಥ್ ರವರು ಬಡವರ ಪಾಲಿನ ದೇವರಂದೇ ಪ್ರಸಿದ್ಧರಾಗಿದ್ದರು. ಅತೀ ಕಡಿಮೆ ಹಣ ಪಡೆದು ಸೇವೆ ಮಾಡುತ್ತಿದ್ದ ಅವರು ಅನೇಕ ಸಂದರ್ಭಗಳಲ್ಲಿ ಹಣವನ್ನೇ ಪಡೆಯದೆ ಚಿಕಿತ್ಸೆ ನೀಡುತ್ತಿದ್ದರು.  ಡಾ. ಬಿ ಕೆ ವಿಶ್ವನಾಥ್  ಹೆಂಡತಿ, ಮಗಳು , ಅಳಿಯ ಮತ್ತು ನಾಲ್ವರು ಮೊಮ್ಮಕ್ಕಳು ಹಾಗೂ ಅಪಾರ ಬಂದು ಮಿತ್ರರನ್ನು ಅಗಲಿದ್ದಾರೆ, ಡಾ, ಬಿಕೆ ವಿಶ್ವನಾಥ್ ನಿಧನಕ್ಕೆ ವೈದ್ಯ ಲೋಕ, ಸಮಾಜದ ಗಣ್ಯರು, ಜನಸಾಮಾನ್ಯರು ಕಂಬನಿ ಮಿಡಿದಿದ್ದಾರೆ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *