Connect with us

    DAKSHINA KANNADA

    ಮಂಗಳೂರು ಜೆರೋಸಾ ಶಾಲಾ ಪ್ರಕರಣ, ತನಿಖೆ ಆರಂಭಿಸಿದ ಐಎಎಸ್‌ ಅಧಿಕಾರಿ ಆಕಾಶ್ ಶಂಕರ್..!

    ಮಂಗಳೂರು  :  ವಿವಾದ ಸೃಷ್ಟಿಸಿದ್ದ ಜೆರೋಸಾ ಶಾಲೆಯ ಹಿಂದೂ ಧರ್ಮ ಅವಹೇಳನ ಮತ್ತು ಆ ನಂತರ ನಡೆದ ಬೆಳವಣಿಗೆಗಳ ಬಗ್ಗೆ ತನಿಖೆ ನಡೆಸಲು ಸರ್ಕಾರದ ಸೂಚನೆಯಂತೆ ಐಎಎಸ್ ಅಧಿಕಾರಿ ಆಕಾಶ್ ಶಂಕರ್ ನಗರಕ್ಕೆ ಆಗಮಿಸಿ ತನಿಖೆ ಆರಂಭಿಸಿದ್ದಾರೆ.

    ಜಿಲ್ಲಾ ಪಂಚಾಯತ್ ಕಚೇರಿಯಲ್ಲಿ ಅಧಿಕಾರಿಗಳ ಜೊತೆ ಚರ್ಚೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು. ಘಟನೆಯ ಬಗ್ಗೆ ಈಗಾಗಲೆ ಪ್ರಾಥಮಿಕ ಮಾಹಿತಿಯನ್ನು ಸಂಗ್ರಹಿಸಿದ್ದೇನೆ. ಹಂತ ಹಂತವಾಗಿ ಎಲ್ಲವನ್ನೂ ತನಿಖೆ ನಡೆಸಲಾಗುವುದು ಎರಡು ದಿನ ಇಲ್ಲೇ ಇದ್ದು ಸಮಗ್ರ ಮಾಹಿತಿ ಸಂಗ್ರಹಿಸಿ ತನಿಖೆಯ ವರದಿಯನ್ನು ಅತೀ ಶೀಘ್ರ ಸರಕಾರಕ್ಕೆ ಸಲ್ಲಿಸಲಾಗುವುದು ಎಂದಿದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply