Connect with us

    LATEST NEWS

    ಮಂಗಳೂರು : ಸಂಘನಿಕೇತನದ ಗಣೇಶೋತ್ಸವದಲ್ಲಿ ಪಾಲ್ಗೊಂಡು ಸೌಹಾರ್ದತೆ ಮೆರೆದ ಕ್ರೈಸ್ತ ಸಮುದಾಯದ ಗಣ್ಯರು..!

    ಆರ್ ಎಸ್ ಎಸ್ ನ ದಕ್ಷಿಣ ಪ್ರಾಂತ ಶಕ್ತಿ ಕೇಂದ್ರ ಮಂಗಳೂರು ಸಂಘನಿಕೇತನದಲ್ಲಿ ಆರಾಧಿಸಲ್ಪಡುವ ಗಣೇಶೋತ್ಸವದಲ್ಲಿ ಕ್ರೈಸ್ತ ಸಮುದಾಯದ ಗಣ್ಯರು ಭೇಟಿ ನೀಡಿ ವಿಘ್ನ ನಿವಾರಕನ ಆಶೀರ್ವಾದ ಪಡೆದು ಸೌಹಾರ್ದತೆಯ ಸಂದೇಶ ಸಾರಿದ್ದಾರೆ.

    ಮಂಗಳೂರು. ಸೆಪ್ಟೆಂಬರ್ 22: ಆರ್ ಎಸ್ ಎಸ್ ನ ದಕ್ಷಿಣ ಪ್ರಾಂತ ಶಕ್ತಿ ಕೇಂದ್ರ ಮಂಗಳೂರು ಸಂಘನಿಕೇತನದಲ್ಲಿ ಆರಾಧಿಸಲ್ಪಡುವ ಗಣೇಶೋತ್ಸವದಲ್ಲಿ ಕ್ರೈಸ್ತ ಸಮುದಾಯದ ಗಣ್ಯರು ಭೇಟಿ ನೀಡಿ ವಿಘ್ನ ನಿವಾರಕನ ಆಶೀರ್ವಾದ ಪಡೆದು ಸೌಹಾರ್ದತೆಯ ಸಂದೇಶ ಸಾರಿದ್ದಾರೆ.

    ರಾಷ್ಟ್ರೀಯವಾದಿ ಕ್ರೈಸ್ತರ ವೇದಿಕೆ ನೇತೃತ್ವದಲ್ಲಿ ಮಂಗಳೂರು ಕ್ರೈಸ್ತ ಧರ್ಮಪ್ರಾಂತ್ಯದ ಸಾರ್ವಜನಿಕ ಸಂಪರ್ಕಾಧಿಕಾರಿ ರೋಯ್ ಕ್ಯಾಸ್ಟೆಲೀನೊ ನೇತೃತ್ವದಲ್ಲಿ ನಿಯೋಗ ಗಣೇಶೋತ್ಸವದಲ್ಲಿ ಭಾಗಿಯಾಯಿತು.

    ಈ ಸಂದರ್ಭ ಸಾರ್ವಜನಿಕ ಗಣೇಶೋತ್ಸವಕ್ಕೆ ಫಲ-ಪುಷ್ಪಗಳನ್ನು ಮುಖಂಡರು ಅರ್ಪಿಸಿ ಪೂಜೆ ಸಲ್ಲಿಸಿದರು.

    ಆರ್ ಎಸ್ ಎಸ್ ದಕ್ಷಿಣ ಪ್ರಾಂತ‌ ಸರಸಂಘ ಚಾಲಕ ಡಾ ವಾಮನ್‌ ಶಣೈ ಅವರು ಗಣ್ಯರನ್ನು ಬರಮಾಡಿಕೊಂಡರು.

    ಸಂಘನಿಕೇತನದಲ್ಲಿ ಕಳೆದ 76 ವರ್ಷಗಳಿಂದ ಗಣೇಶೋತ್ಸವ ಆಚರಿಸಿಕೊಂಡು ಬರಲಾಗುತ್ತಿದೆ.

    ಪಾದರಕ್ಷೆಗೂ ಶಿಸ್ತು :
    ಸಂಘನಿಕೇತನದಲ್ಲಿ ನಡೆಯುತ್ತಿರುವ ಸಾರ್ವಜನಿಕ ಗಣೇಶೋತ್ಸವ ಸಂದರ್ಭದಲ್ಲಿ ಪಾದರಕ್ಷೆ ಜೋಡಿಸಿಡುವಲ್ಲೂ ಶಿಸ್ತು ಕಂಡು ಬಂದಿದೆ. ಅಚ್ಚು ಕಟ್ಟಾಗಿ ಸಾಲಾಗಿ ಯಾವುದೇ ಗೊಂದಲಗಳಿಗೆ ಆಸ್ಪದವಿಲ್ಲದೆ ದರ್ಶನಕ್ಕಾಗಿ ಬಂದ ಭಕ್ತರ ಪಾದರಕ್ಷೆ ಸಭಾಂಗಣದ ಹೊರಗಡೆ ಅಚ್ಚುಕಟ್ಟಾಗಿ ಪೇರಿಸಿಡಲಾಗಿದ್ದು ಮಾದರಿಯಾಗಿದೆ.

     

    Share Information
    Advertisement
    Click to comment

    You must be logged in to post a comment Login

    Leave a Reply