DAKSHINA KANNADA
ಮಂಗಳೂರು : 27 ವರ್ಷಗಳ ಬಳಿಕ ಸುಲಿಗೆ ಪ್ರಕರಣದ ಆರೋಪಿಯ ಬಂಧನ..!

ಸುಲಿಗೆ ಪ್ರಕರಣ ಒಂದರಲ್ಲಿ ಬೇಕಾಗಿದ್ದ ಆರೋಪಿಯನ್ನು ಮಂಗಳೂರು ಪೊಲೀಸರು ಪ್ರಕರಣ ನಡೆದ 27 ವರ್ಷಗಳ ಬಳಿಕ ಕೇರಳದ ಕ್ಯಾಲಿಕಟ್ನಲ್ಲಿ ಬಂಧಿಸಿ ಮಂಗಳೂರು ನ್ಯಾಯಾಲಕ್ಕೆ ಹಾಜರು ಪಡಿಸಲಾಗಿದ್ದು ನ್ಯಾಯಾಂಗದ ಬಂಧನಕ್ಕೆ ಒಪ್ಪಿಸಲಾಗಿದೆ.
ಮಂಗಳೂರು : ಸುಲಿಗೆ ಪ್ರಕರಣ ಒಂದರಲ್ಲಿ ಬೇಕಾಗಿದ್ದ ಆರೋಪಿಯನ್ನು ಮಂಗಳೂರು ಪೊಲೀಸರು ಪ್ರಕರಣ ನಡೆದ 27 ವರ್ಷಗಳ ಬಳಿಕ ಕೇರಳದ ಕ್ಯಾಲಿಕಟ್ನಲ್ಲಿ ಬಂಧಿಸಿ ಮಂಗಳೂರು ನ್ಯಾಯಾಲಕ್ಕೆ ಹಾಜರು ಪಡಿಸಲಾಗಿದ್ದು ನ್ಯಾಯಾಂಗದ ಬಂಧನಕ್ಕೆ ಒಪ್ಪಿಸಲಾಗಿದೆ.

ಪಿ ಮನೋಜ್(52) ಬಂಧಿತ ಆರೋಪಿಯಾಗಿದ್ದಾನೆ.
25- 12-1996 ರಲ್ಲಿ ಉರ್ವ ಠಾಣೆಗೆ ಅಶೋಕ್ ನಗರದ ವಿನ್ಸೆಂಟ್ ಎಂಬವರು ತನ್ನ ಒಮಿನಿ ಕಾರು ಕಳವಾದ ಬಗ್ಗೆ ದೂರು ನೀಡಿದ್ದರು.
ದೂರು ದಾಖಲಾಗಿ 27 ವರ್ಷಗಳು ಕಳೆದರೂ ಆರೋಪಿಯ ಪತ್ತೆ ಕಾರ್ಯ ವಿಫಲವಾಗಿತ್ತು.
ಈ ಮಧ್ಯೆಕರಣದ ಆರೋಪಿ ಕೇರಳದಲ್ಲಿ ತಲೆ ಮೆರಸಿಕೊಂಡಿರುವ ಬಗ್ಗೆ ಖಚಿತ ಮಾಹಿತಿ ಪಡೆದ ಉರ್ವ ಠಾಣಾಧಿಕಾರಿ ಭಾರತಿ ಮತ್ತು ಸಿಬಂದಿ ವರ್ಗ ದಾಳಿ ನಡೆಸಿ ಆರೋಪಿ ಮನೋಜ್ನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ.