BELTHANGADI
ನೇತ್ರಾವತಿ ನದಿಯಲ್ಲಿ ಮುಳುಗಿ ಯುವಕ ಸಾವು….!!
ಬೆಳ್ತಂಗಡಿ: ನೇತ್ರಾವತಿ ನದಿಗೆ ಸ್ನಾನಕ್ಕೆಂದು ತೆರಳಿದ್ದ ಯುವಕನೊರ್ವ ಸಾವನಪ್ಪಿರುವ ಘಟನೆ ಮುಂಡಾಜೆ ಗ್ರಾಮದ ಪರಮುಖ ಎಂಬಲ್ಲಿ ನಡೆದಿದೆ..
ಮೃತ ಯುವಕನನ್ನು ಪುತ್ತೂರು ತಾಲೂಕು ಕಬಕ ನಿವಾಸಿ ಸುಂದರಿ ಎಂಬವರ ಪುತ್ರ ಕಿರಣ್ ( 20) ಎಂಬವರೆಂದು ತಿಳಿದುಬಂದಿದೆ.ತನ್ನ ಅಜ್ಜಿಮನೆ ಮುಂಡಾಜೆಯ ಪರಮುಖಕ್ಕೆ ಬಂದಿದ್ದ ಸಂದರ್ಭ ರವಿವಾರ ಸಂಜೆಯ ವೇಳೆ ಸಹೋದರನ ಜೊತೆ ನದಿಗೆ ಹೋಗಿದ್ದು ಈ ವೇಳೆ ಆಕಸ್ಮಿಕ ನಡೆದಿದೆ ಎನ್ನಲಾಗಿದೆ.