Connect with us

    LATEST NEWS

    ರಾಜ್ಯ ಸರಕಾರದ ಮುಖ್ಯಕಾರ್ಯದರ್ಶಿ ಮನೆಯಲ್ಲಿ ಮಳೆನಾಡು ಗಿಡ್ಡ ತಳಿ ಹಸು

    ಸುಳ್ಯ ಸೆಪ್ಟೆಂಬರ್ 01: ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರ ಮನೆಯಲ್ಲಿ ಮಲೆನಾಡ ಗಿಡ್ಡ ತಳಿಯ ಹಸುಗಳು ಆಗಮಿಸಿದೆ.


    ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರು ತಮ್ಮ ಮನೆಯಲ್ಲಿ ಮಲೆನಾಡು ಗಿಡ್ಡ ತಳಿಯ ಜಾನುವಾರು ಸಾಕಲು ನಿರ್ಧರಿಸಿದ್ದರು. ಜಿಲ್ಲೆಯ ಕೊಯಿಲ ಪಶುಪಾಲನಾ ಕೇಂದ್ರವನ್ನು ಸಂಪರ್ಕಿಸಿ ‘ಮಲೆನಾಡು ಗಿಡ್ಡ’ ತಳಿಯ ಬಗ್ಗೆ ವಿಚಾರಿಸಿದ್ದರು. ಆದರೆ, ಅಲ್ಲಿಂದ ರೈತರಿಗೆ ಮಾತ್ರ ಜಾನುವಾರುಗಳ ವಿತರಣೆ ಮಾಡಲು ಅವಕಾಶ ಇದೆ. ಹೀಗಾಗಿ ಅಲ್ಲಿಯ ಉಪನಿರ್ದೇಶಕ ಡಾ.ಪ್ರಸನ್ನ ಹೆಬ್ಬಾರ್ ಅವರು ರೈತ ಅಕ್ಷಯ ಆಳ್ವ ಅವರನ್ನು ಸಂಪರ್ಕಿಸಿದರು.

    ಅಲೆಕ್ಕಾಡಿಗೆ ಭೇಟಿ ನೀಡಿದ ಅಧಿಕಾರಿಗಳು ‘ಹಂಸಿ’ ಎನ್ನುವ ಐದು ವರ್ಷದ ಗೋವು, ಅದರ ಕರು ಪಂಚಮಿ ಹಾಗೂ ಬಾಳುಗೋಡು ರಾಜಶೇಖರ ಭಟ್ ಎಂಬುವರಿಗೆ ಅಕ್ಷಯ ಆಳ್ವ ಅವರು ನೀಡಿದ್ದ ಎರಡೂವರೆ ವರ್ಷದ ಸ್ವರ್ಣಕಪಿಲೆ ಹಸು, ಕರು ಸೇರಿದಂತೆ ಎರಡು ಹಸು ಮತ್ತು ಎರಡು ಕರುಗಳನ್ನು ಗೊತ್ತುಪಡಿಸಿದರು. ಇವುಗಳನ್ನು ಶಾಲಿನಿ ರಜನೀಶ್‌ ಖರೀದಿಸಿದ್ದು, ಅವುಗಳನ್ನು ಪೂಜೆ ಸಲ್ಲಿಸಿ ತಮ್ಮ ಮನೆಗೆ ಬರಮಾಡಿಕೊಂಡರು.

    Share Information
    Advertisement
    Click to comment

    You must be logged in to post a comment Login

    Leave a Reply