Connect with us

KARNATAKA

ಯುವಕರು–ಯುವತಿಯರ ಅಸಭ್ಯ ವರ್ತನೆ ತಡೆಯಲು ಕಬ್ಬನ್ ಪಾರ್ಕ್‌ನಲ್ಲಿ ಧ್ವನಿವರ್ಧಕ!

ಬೆಂಗಳೂರು, ಎಪ್ರಿಲ್ 06: ಕಬ್ಬನ ಉದ್ಯಾನದಲ್ಲಿ ವಯಸ್ಕರ ಅಸಭ್ಯ ವರ್ತನೆಯನ್ನು ನಿಯಂತ್ರಿಸಲು ಭದ್ರತಾ ಸಿಬ್ಬಂದಿಗೆ ತೋಟಗಾರಿಕೆ ಇಲಾಖೆ ಧ್ವನಿವರ್ಧಕ ಗಳನ್ನು ನೀಡಿದೆ.

‘ಉದ್ಯಾನಕ್ಕೆ ಬರುವ ಕೆಲವರ ವರ್ತನೆ ಮಿತಿ ಮೀರಿತ್ತು. ಕೆಲವು ಯುವಕ–ಯುವತಿಯರು ಮನ ಬಂದಂತೆ ಅಸಭ್ಯವಾಗಿ ವರ್ತಿಸುತ್ತಿದ್ದಾರೆ. ಕುಟುಂಬ ಸಮೇತ ಉದ್ಯಾನಕ್ಕೆ ಬರುವ ಹಿರಿಯರಿಗೆ, ಮಕ್ಕಳಿಗೆ, ಮಹಿಳೆಯರಿಗೆ ಇದು ಕಿರಿಕಿರಿಯಾಗುತ್ತಿತ್ತು. ಇದನ್ನು ತಡೆಯಲು ಭದ್ರತಾ ಸಿಬ್ಬಂದಿ ಧ್ವನಿವರ್ಧಕ ಬಳಸಿ ಎಚ್ಚರಿಕೆ ನೀಡುತ್ತಿದ್ದಾರೆ.

ಉದ್ಯಾನದಲ್ಲಿ ಇಂತಹ ಅಸಭ್ಯ ವರ್ತನೆಗಳಿಗೆ ಕಡಿವಾಣ ಬಿದ್ದಂತಾಗಿದೆ. ತೋಟಗಾರಿಕೆ ಇಲಾಖೆಯ ಈ ನೂತನ ಕ್ರಮ ಶ್ಲಾಘನೀಯ’ ಎಂದು ಕಬ್ಬನ್ ಉದ್ಯಾನದ ನಡಿಗೆದಾರು ತಿಳಿಸಿದ್ದಾರೆ.

‘ಉದ್ಯಾನದ ನಾಲ್ಕು ಪ್ರವೇಶ ದ್ವಾರಗಳಲ್ಲಿ ಕಾರ್ಯನಿರ್ವಹಿಸುವ ಭದ್ರತಾ ಸಿಬ್ಬಂದಿಗೆ ಧ್ವನಿವರ್ಧಕ ನೀಡಲಾಗಿದೆ. ಉದ್ಯಾನದಲ್ಲಿ ಸ್ವಚ್ಛತೆ ಕಾಪಾಡುವುದು, ಗಿಡ–ಮರಗಳಿಗೆ ಹಾನಿ ಮಾಡಬಾರದು ಎಂಬ ಎಚ್ಚರಿಕೆಯನ್ನು ಧ್ವನಿವರ್ಧಕದ ಮೂಲಕ ಜಾಗೃತಿ ಮೂಡಿಸುವ ಕೆಲಸ ಮಾಡಲಾಗುತ್ತದೆ’.

Share Information
Continue Reading
Advertisement
Click to comment

Leave a Reply

Your email address will not be published. Required fields are marked *