Connect with us

DAKSHINA KANNADA

ಪುತ್ತೂರಿನಲ್ಲಿ ಸಿಡಿಲಾಘಾತಕ್ಕೆ ಫೋಟೊ ಸ್ಟುಡಿಯೋ ಭಸ್ಮ,.,!

ಸಿಡಿಲಿನ ಹೊಡೆತಕ್ಕೆ ಶಾರ್ಟ್ ಸರ್ಕ್ಯೂಟ್ ಸಂಭವಿಸಿ ಫೋಟೊ ಸ್ಟೂಡಿಯೊಂದು ಸುಟ್ಟು ಭಸ್ಮವಾದ ಘಟನೆ ದ.ಕ. ಜಿಲ್ಲೆಯ ಪುತ್ತೂರಿನಲ್ಲಿ ಮಂಗಳವಾರ ಸಂಜೆ ಸಂಭವಿಸಿದೆ.

ಪುತ್ತೂರು : ಸಿಡಿಲಿನ ಹೊಡೆತಕ್ಕೆ ಶಾರ್ಟ್ ಸರ್ಕ್ಯೂಟ್ ಸಂಭವಿಸಿ ಫೋಟೊ ಸ್ಟೂಡಿಯೊಂದು ಸುಟ್ಟು ಭಸ್ಮವಾದ ಘಟನೆ ದ.ಕ. ಜಿಲ್ಲೆಯ ಪುತ್ತೂರಿನಲ್ಲಿ ಮಂಗಳವಾರ ಸಂಜೆ ಸಂಭವಿಸಿದೆ.

ಪುತ್ತೂರಿನ ಹೃದಯ ಭಾಗದಲ್ಲಿನ ಜಿಎಲ್ ಕಾಂಪ್ಲೆಕ್ಸ್ ನಲ್ಲಿರುವ ಅಡ್ಲ್ಯಾಬ್ ಭಸ್ಮವಾದ ಪೋಟೊ ಸ್ಟುಡಿಯೋವಾಗಿದೆ.

ಸಿಡಿಲು ಬಡಿದು ಅಷ್ಟೊಂದು ದೊಡ್ಡ ಅಘಾತವಾದ್ರೂ ಅಲ್ಲೇ ಇದ್ದ ಸಿಬಂದಿ ಅದೃಷ್ಟವಶತ್ ಅಪಾಯದಿಂದ ಪಾರಾಗಿದೆ.

ಸಿಡಿಲಿನ ಹೊಡೆತಕ್ಕೆ ಸ್ಟುಡಿಯೋದಲ್ಲಿನ ವಸ್ತಗಳು ಸಂಪೂರ್ಣ ಭಸ್ಮವಾಗಿವೆ.

ಕಂಪ್ಯೂಟರ್ ಸಿಸ್ಟಂ, ಫೋಟೊ ಮೆಷಿನರಿ, ಪ್ಯಾನ್, ಫೋಟೊ ಆಲ್ಬಂ, ಇನ್ನಿತರ ವಸ್ತಗಳು ಸುಟ್ಟು ಕರಕಲಾಗಿವೆ.

ಪೊನ್ನಪ್ಪ ಎಂಬವರಿಗೆ ಈ ಅಡ್ಲ್ಯಾಬ್ ಸ್ಟುಡಿಯೋ ಸೇರಿದಾಗಿದ್ದು ಸುಮಾರು 6 ಲಕ್ಷ ನಷ್ಟ ಉಂಟಾಗಿದೆ ಎಂದು ಅಂದಾಜಿಸಲಾಗಿದೆ.

ಘಟನೆಯ ಮಾಹಿತಿ ಪಡೆದ ಅಗ್ನಿಶಾಮಕ ದಳ ಮತ್ತು ಸ್ಥಳೀಯರು ಬೆಂಕಿ ನಂದಿಸಿದ್ದಾರೆ.

ಗಣೇಶ್ ಪ್ರಸಾದ್ ಹೋಟೆಲ್ ಸಿಬ್ಬಂದಿಗಳು ಧಾವಿಸಿ ಬಂದು ಬೆಂಕಿ ನಂದಿಸಲು ಸಹಕರಿಸಿದ್ದಾರೆ.

ಗ್ರಾಹಕರಿಗೆ ನೀಡಬೇಕಾಗಿದ್ದ ಹಲವು ಮದುವೆ ಆಲ್ಬಂಗಳು ಸುಟ್ಟು ಭಸ್ಮವಾಗಿದೆ,

Share Information
Continue Reading
Advertisement
Click to comment

Leave a Reply

Your email address will not be published. Required fields are marked *