Connect with us

LATEST NEWS

ಸಾರಥಿ 1 ಮತ್ತು 3 ರಲ್ಲಿ ಸಲ್ಲಿಸಿದ ಡಿಎಲ್ ಅರ್ಜಿಗಳ ವಿಲೇವಾರಿಗೆ – ಜುಲೈ 20 ಅಂತಿಮ ದಿನ

ಸಾರಥಿ 1 ಮತ್ತು 3 ರಲ್ಲಿ ಸಲ್ಲಿಸಿದ ಡಿಎಲ್ ಅರ್ಜಿಗಳ ವಿಲೇವಾರಿಗೆ – ಜುಲೈ 20 ಅಂತಿಮ ದಿನ

ಮಂಗಳೂರು ಜುಲೈ 10 : ಜೂನ್ 1 ರಿಂದ ಸಾರಥಿ-4 ತಂತ್ರಾಂಶವನ್ನು ಮಂಗಳೂರು ಪ್ರಾದೇಶಿಕ ಸಾರಿಗೆ ಕಛೇರಿಯಲ್ಲಿ ಅನುಷ್ಠಾನಗೊಂಡಿದ್ದು, ಇದರ ಮುಂಚಿತವಾದ ಸಾರಥಿ-1 ಮತ್ತು ಸಾರಥಿ-3 ರಲ್ಲಿ ಸಲ್ಲಿಸಿರುವ ಚಾಲನಾ ಅನುಜ್ಞಾಪತ್ರಕ್ಕೆ ಸಂಬಂದಿಸಿದ ಎಲ್ಲಾ ರೀತಿಯ ಅರ್ಜಿಗಳನ್ನು ವಿಲೇವಾರಿ ಮಾಡಲು ಮಂಗಳೂರು ಪ್ರಾದೇಶಿಕ ಸಾರಿಗೆ ಕಛೇರಿಯ ಚಾಲನಾ ಅನುಜ್ಞಾ ಪ್ರಾಧಿಕಾರವು ಜುಲೈ 20 ರಂದು ಅಂತಿಮ ದಿನಾಂಕವೆಂದು ಸೂಚಿಸಿದೆ.

ಅಭ್ಯರ್ಥಿಗಳು /ಅರ್ಜಿದಾರರು ಜೂನ್ 1 ರ ಮುಂಚಿತವಾಗಿ ಪ್ರಾದೇಶಿಕ ಸಾರಿಗೆ ಕಛೇರಿಯಲ್ಲಿ ಕಲಿಕಾ ಅನುಜ್ಞಾಪತ್ರ (ಎಲ್.ಎಲ್.ಆರ್.) ಪಡೆಯುವವರು ಜುಲೈ 20 ರ ಒಳಗಾಗಿ ಖಾಯಂ ಚಾಲನಾ ಅನುಜ್ಞಾಪತ್ರಕ್ಕೆ ಅರ್ಜಿ ಸಲ್ಲಿಸಿ, ಹಳೆಯ ತಂತ್ರಾಂಶದಲ್ಲಿಯೇ ತಮ್ಮ ಕೆಲಸವನ್ನು ಸಂಪೂರ್ಣಮಾಡಿಕೊಳ್ಳಲು ಈ ಮೂಲಕ ತಿಳಿಸಿದೆ.

ಹೊಸ ತಂತ್ರಾಂಶ (ಸಾರಥಿ-4) ಜುಲೈ 20 ರಿಂದ ಪೂರ್ಣ ಪ್ರಮಾಣದಲ್ಲಿ ಅನುಷ್ಠಾನಗೊಳ್ಳಲಿದ್ದು, ಅನಂತರ ಹಳೆಯ ತಂತ್ರಾಂಶದ ಕಾರಣದಿಂದಾಗಿ ಪ್ರಾದೇಶಿಕ ಸಾರಿಗೆ ಕಛೇರಿಯಲ್ಲಿ ಯಾವುದೇ ಕಾರ್ಯದಲ್ಲಿ ನ್ಯೂನತೆ ಉಂಟಾದಲ್ಲಿ ಇಲಾಖೆಯ ಜವಾಬ್ದಾರಿಯಲ್ಲ ಸಾಧ್ಯವಾಗುವುದಿಲ್ಲ ಎಂದು ಉಪಸಾರಿಗೆ ಆಯುಕ್ತರು (ಪ್ರಭಾರ), ಹಾಗೂ ಹಿರಿಯ ಪ್ರಾದೇಶಿಕ ಸಾರಿಗೆ ಅಧಿಕಾರಿ ಪ್ರಕಟಣೆ ತಿಳಿಸಿದೆ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *