Connect with us

DAKSHINA KANNADA

ಸಾವಿರಾರು ಭಕ್ತರ ನಡುವೆ ನಡೆದ ಕುಕ್ಕೆ ಸುಬ್ರಹ್ಮಣ್ಯ ಚಂಪಾಷಷ್ಠಿ ಬ್ರಹ್ಮರಥೋತ್ಸವ

PHOTOS :  Praksh Subramanya

ಸುಬ್ರಹ್ಮಣ್ಯ ಡಿಸೆಂಬರ್ 20 : ನಾಡಿನ ಪ್ರಖ್ಯಾತ ನಾಗಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯದ ರಥಬೀದಿಯಲ್ಲಿ ಚಂಪಾಷಷ್ಠಿ ಬ್ರಹ್ಮರಥೋತ್ಸವ ಸಂಪನ್ನಗೊಂಡಿದೆ. ಕೊರೊನಾ ಹಿನ್ನಲೆ ಸರಳವಾಗಿ ನಡೆದರೂ ಈ ಐತಿಹಾಸಿಕ ಕ್ಷಣಕ್ಕೆ ಸಾವಿರಾರು ಭಕ್ತರು ಸಾಕ್ಷಿಯಾದರು.

ಇಂದು ಬೆಳಗ್ಗೆ 7.25ರ ಧನುರ್ ಲಗ್ನದಲ್ಲಿ ರಥಾರೂಢನಾದ ಸುಬ್ರಹ್ಮಣ್ಯ ಸ್ವಾಮಿಯನ್ನು ಕಣ್ತುಂಬಿಕೊಳ್ಳಲು ಜನಸಾಗರವೇ ತುಂಬಿತ್ತು. ಭಕ್ತರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸಪಟ್ಟರು. ಕೋವಿಡ್ ಹಿನ್ನಲೆ ಅನ್ಯ ಜಿಲ್ಲೆ ಮತ್ತು ಅನ್ಯ ರಾಜ್ಯದ ಭಕ್ತರ ಪ್ರವೇಶ ನಿಷೇಧಿಸಲಾಗಿತ್ತು. ಪಾಸ್ ಇದ್ದವರಿಗೆ ಮಾತ್ರ ಬ್ರಹ್ಮರಥೋತ್ಸವದಲ್ಲಿ ಪಾಲ್ಗೊಳ್ಳಲು ಅವಕಾಶ ನೀಡಲಾಗಿತ್ತು. ಜಿಲ್ಲಾಡಳಿತ ನಿಯಮಕ್ಕೂ ಕ್ಯಾರೆ ಅನ್ನದೆ ಕುಕ್ಕೆ ದೇವಳದ ರಥಬೀದಿಯಲ್ಲಿ ಜನಸಾಗರ ಸೇರಿತ್ತು.

Share Information
Continue Reading
Advertisement
Click to comment

Leave a Reply

Your email address will not be published. Required fields are marked *