Connect with us

LATEST NEWS

ಕುದ್ರೋಳಿ – ಕಾರಿನ ಬ್ಯಾನೆಟ್ ನಲ್ಲಿ ಸಿಕ್ಕಿಹಾಕಿಕೊಂಡು ಹೆಬ್ಬಾವು

Share Information

ಮಂಗಳೂರು ಅಗಸ್ಟ್ 21: ಕಾರಿನ ಬಾನೆಟ್ ಒಂದರಲ್ಲಿ ಹೆಬ್ಬಾವೊಂದು ಕಾಣಿಸಿಕೊಂಡ ಘಟನೆ ಮಂಗಳೂರಿನ ಮಣ್ಣಗುಡ್ಡೆ ವಾಲಿಬಾಲ್ ಸ್ಟೆಡಿಯಂ ಪಕ್ಕ ನಡೆದಿದೆ.


ವ್ಯಕ್ತಿಯೊಬ್ಬರು ಕುದ್ರೋಳಿ ಸಮೀಪದ ಕಂಬಳದ ಫ್ಲ್ಯಾಟ್‌ಗೆ ಬಂದಿದ್ದು, ಅಲ್ಲಿಂದ ವಾಪಸ್ ತನ್ನ ಮನೆಗೆ ಕಾರಿನಲ್ಲಿ ತೆರಳುತ್ತಿದ್ದಾಗ ಮಣ್ಣಗುಡ್ಡೆ ಬಳಿ ಇಂಜಿನ್ ಬಂದ್ ಬಿದ್ದಿತ್ತು ಎನ್ನಲಾಗಿದೆ. ಎಷ್ಟೇ ಪ್ರಯತ್ನಿಸಿದರೂ ಕಾರು ಮುಂದೆ ಚಲಿಸಲಿಲ್ಲ. ಹಾಗಾಗಿ ಕಾರಿನ ಮಾಲಕರು ಮೆಕ್ಯಾನಿಕ್‌ನ್ನು ಸ್ಥಳಕ್ಕೆ ಕರೆಸಿಕೊಂಡಿದ್ದಾರೆ. ಆತ ಕಾರಿನ ಬಾನೆಟ್ ತೆರೆದು ನೋಡಿದಾಗ ಅದರೊಳಗೆ ಹೆಬ್ಬಾವು ಮುದುಡಿ ಕುಳಿತಿರುವುದು ಕಂಡು ಬಂದಿದೆ. ಬಳಿಕ ಸ್ಥಳೀಯರ ಜತೆ ಸೇರಿ ಹೆಬ್ಬಾವನ್ನು ಹೊರ ತೆಗೆಯಲಾಯಿತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.


Share Information
Advertisement
Click to comment

You must be logged in to post a comment Login

Leave a Reply