Connect with us

LATEST NEWS

ಉಡುಪಿ – ದೀರ್ಘದಂಡ ನಮಸ್ಕಾರ ಮೂಲಕ ಕೆಎಸ್ ಆರ್ ಟಿಸಿ ಮೆಕ್ಯಾನಿಕ್ ನಿಂದ ವಿಭಿನ್ನ ರೀತಿ ಪ್ರತಿಭಟನೆ

ಉಡುಪಿ ಡಿಸೆಂಬರ್ 13: ರಾಜ್ಯದಲ್ಲಿ ನಡೆಯುತ್ತಿರುವ ಕೆಎಸ್ ಆರ್ ಟಿಸಿ ನೌಕರರ ಪ್ರತಿಭಟನೆ ಕಾವು ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೆ ಇದ್ದು, ಇದೀಗ ಕರಾವಳಿಗೂ ಪ್ರತಿಭಟನೆಯ ಬಿಸಿ ತಟ್ಟಲಾರಂಭಿಸಿದೆ.

ಉಡುಪಿಯಲ್ಲಿ ಕೆಎಸ್ ಆರ್ ಟಿಸಿ ಮೆಕ್ಯಾನಿಕ್ ಒಬ್ಬರು ರಾಜ್ಯ ಸರಕಾರದ ವಿರುದ್ದ ವಿಭಿನ್ನ ರೀತಿಯಲ್ಲಿ ಪ್ರತಿಭಟನೆ ನಡೆಸಿದ್ದಾರೆ. ಕೆಎಸ್ ಆರ್ ಟಿಸಿ ಬಸ್ ನಿಲ್ದಾಣದಿಂದ ಕೃಷ್ಣ ಮಠದವರೆಗೆ ದೀರ್ಘದಂಡ ನಮಸ್ಕಾರ ಹಾಕಿ ರಾಜ್ಯಸರಕಾರದ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಉಡುಪಿಯ ಕೆಎಸ್ ಆರ್ ಟಿಸಿ ಡಿಪೋದಲ್ಲಿ ಮೆಕ್ಯಾನಿಕ್ ಆಗಿರುವ ನಾಗೇಶ್ ಬೋವಿ, ದೀರ್ಘದಂಡ ನಮಸ್ಕಾರ ಮೂಲಕ ಪ್ರತಿಭಟನೆಗೆ ಉಡುಪಿ ನಗರ ಠಾಣೆಯಲ್ಲಿ ಅವಕಾಶ ಕೋರಿದ್ದರು, ಆದರೆ ಪೊಲೀಸರು ಅವಕಾಶ ನಿರಾಕರಿಸಿದ್ದಾರೆ. ಆದರೂ ಉಡುಪಿಯ ಕೆಎಸ್ಆರ್ಟಿಸಿ ಬಸ್ ನಿಲ್ದಾಣದ ಹೊರಟ ಮೆಕ್ಯಾನಿಕ್ ನಾಗೇಶ್ ಬೋವಿ ಬಸ್ ನಿಲ್ದಾಣದಿಂದ ಕೃಷ್ಣ ಮಠದವರಿಗೆ ಧೀರ್ಘದಂಡ ನಮಸ್ಕಾರ ಮಾಡಿ ಸಾರಿಗೆ ನೌಕರರ ಬೇಡಿಕೆ ಒತ್ತಾಯಿಸಿ ವಿಭಿನ್ನ ರೀತಿಯಲ್ಲಿ ಪ್ರತಿಭಟನೆ ದಾಖಲಿಸಿದ್ದಾರೆ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *