Connect with us

LATEST NEWS

ಏಕಾಏಕಿ ಮಂಗಳೂರು – ಬೆಂಗಳೂರು ಹಗಲು ರೈಲು ರದ್ದು ಮಾಡಿದ್ದಕ್ಕೆ ಸಂಸದ ಕೋಟ ಶ್ರೀನಿವಾಸ ಪೂಜಾರಿ ಆಕ್ಷೇಪ

ಉಡುಪಿ ಮೇ 19: ರೈಲ್ವೆ ವಿದ್ಯುದೀಕರಣದ ಕಾರಣ ನೀಡಿ ಕಾರವಾರ – ಬೆಂಗಳೂರು ಹಗಲು ರೈಲು ಮತ್ತು ಮಂಗಳೂರು – ಬೆಂಗಳೂರು ಹಗಲು ರೈಲುಗಳನ್ನು 5 ತಿಂಗಳ ಕಾಲ ರದ್ದು ಮಾಡಿದ ನೈರುತ್ಯ ರೈಲ್ವೆ ಕ್ರಮಕ್ಕೆ ಉಡುಪಿ – ಚಿಕ್ಕಮಗಳೂರು ಸಂಸದ ಶ್ರೀನಿವಾಸ್‌ ಪೂಜಾರಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.


ಸಾರ್ವಜನಿಕರ ಬಳಿ ಚರ್ಚಿಸದೇ ಬದಲೀ ಮಾರ್ಗೋಪಾಯಗಳ ಕುರಿತು ಆಲೋಚಿಸಿದೇ ತೆಗೆದುಕೊಂಡ ಈ ತೀರ್ಮಾನದಿಂದ ಪ್ರವಾಸಿಗರು ನಿತ್ಯ ಪ್ರಯಾಣಿಕರು ಮಾತ್ರವಲ್ಲದೇ ಕರಾವಳಿಯ ಭಾರೀ ಮಳೆಯಿಂದಾಗಿ ರಸ್ತೆ ಸಮಸ್ಯೆಯ ಕಾರಣದಿಂದ ರೈಲು ಬಳಕೆ ಮಾಡುವ ಸಾರ್ವಜನಿಕರಿಗೂ ತೀವ್ರ ಸಮಸ್ಯೆಯಾಗಿದೆ ಎಂದು ಅವರು ಕೇಂದ್ರ ರೈಲ್ವೆ ಸಚಿವರಿಗೆ ದೂರವಾಣಿ ಮೂಲಕ ತಿಳಿಸಿದ್ದಾರೆ.

ಈಗಾಗಲೇ ವಿದ್ಯುದೀಕರಣದ ಕಾರ್ಯಗಳಿಗಾಗಿ ಎರಡು ಘಂಟೆಗಳ ಬ್ಲಾಕ್‌ ಇಲಾಖೆಯ ಬಳಿ ಹಾಸನ ಸುಬ್ರಹ್ಮಣ್ಯ ನಡುವೆ ಇದ್ದು, ಸ್ವಲ್ಪವೇ ಪ್ರಯತ್ನ ಪಟ್ಟು ಗೂಡ್ಸ್‌ ಗಾಡಿಗಳ ಮರು ಹೊಂದಾಣಿಕೆ ಮಾಡಿದರೆ ಯಾವ ರೈಲುಗಳ ರದ್ದತಿಯನ್ನೂ ಮಾಡದೇ ವಿದ್ಯುದೀಕರಣಕ್ಕಾಗಿ ಬೇಕಾಗಿದೆ ಎನ್ನಲಾದ 4 ಘಂಟೆಗಳನ್ನು ಹೊಂದಿಸ ಬಹುದಾಗಿದೆ, ಅದರೆ ಈ ಯಾವ ದಿಶೆಯಲ್ಲೂ ಆಲೋಚಿಸದೇ ನೇರಾ ನೇರ ರೈಲುಗಳನ್ನು ಅನಾಮತ್ತು 5 ತಿಂಗಳು ರದ್ದು ಮಾಡಿರುವ ಬಗ್ಗೆ ನೈರುತ್ಯ ರೈಲ್ವೆಗೆ ಪತ್ರ ಬರೆದಿರುವ ಅವರು ತಕ್ಷಣವೇ ರದ್ದತಿಯನ್ನು ಹಿಂದೆಗೆಯುವ ಕುರಿತು ಕ್ರಮ ಕೈಗೊಳ್ಳಬೇಕು. ಒಂದೊಮ್ಮೆ ರದ್ದತಿ ಅನಿವಾರ್ಯವಾದರೆ ಬದಲಿಯಾಗಿ ಕಾರವಾರ ಬೆಂಗಳೂರು ನಡುವೆ ರಾತ್ರಿ ರೈಲನ್ನು ಪಡೀಲ್‌ ಬೈಪಾಸ್‌ ಮೂಲಕ ನೀಡುವಂತೆಯೂ ಸೂಚಿಸಿದ್ದಾರೆ

Share Information
Continue Reading
Advertisement
Click to comment

Leave a Reply

Your email address will not be published. Required fields are marked *