Connect with us

    KARNATAKA

    ಕೋಲಾರ – ಅಣ್ಣ ಕೃಷಿ ಹೊಂಡದಲ್ಲಿ ಮುಳುಗುತ್ತಿದ್ದರೆ..ವಿಡಿಯೋ ಮಾಡುತ್ತಾ ನಿಂತ ತಂಗಿ…!!

    ಕೋಲಾರ, ಮೇ 3: ಕೃಷಿ ಹೊಂಡದಲ್ಲಿ ಈಜಲು ತೆರಳಿದ್ದ ವ್ಯಕ್ತಿಯೊಬ್ಬರು ಈಜಲು ಆಗದೆ ಮುಳುಗಿ ಸಾವನಪ್ಪಿದ ಘಟನೆ ಕೋಲಾರದಲ್ಲಿ ನಡೆದಿದ್ದು, ಅಣ್ಣ ಸಾವಿನ ದವಡೆಯಲ್ಲಿದ್ದರು ಇದರ ಅರಿವೇ ಇಲ್ಲದಂತೆ ಸ್ವತಃ ತಂಗಿಯೇ ಅದರ ವಿಡಿಯೋ ಚಿತ್ರೀಕರಣ ಮಾಡಿದ ಹೃದಯ ವಿದ್ರಾವಕ ಘಟನೆ ಕೋಲಾರ ತಾಲೂಕಿನ ನಾಗನಾಳ ಗ್ರಾಮದಲ್ಲಿ ಸಂಭವಿಸಿದೆ.


    ಮೃತ ಯುವಕನನ್ನು ಮೈಸೂರಿನ ರಾಘವೇಂದ್ರನಗರ ಬಡಾವಣೆ ನಿವಾಸಿ ಗೌತಮ್ ಗೌಡ (26) ಎಂದು ಗುರುತಿಸಲಾಗಿದೆ. ಗೌತಮ್ ಗೌಡ ತಂದೆಯ ಊರಾದ ವೇಮಗಲ್ ಸಮೀಪದ ನಾಗನಾಳ ಗ್ರಾಮಕ್ಕೆ ಆಗಮಿಸಿದ್ದರು. ಈ ವೇಳೆ, ಸರಿಯಾಗಿ ಈಜು ಬಾರದಿದ್ದರೂ ಈಜಲು ಹೋಗಿದ್ದರು. ಆರಂಭದಲ್ಲಿ ಚೆನ್ನಾಗಿಯೇ ಈಜುತ್ತಿದ್ದ ಅವರು ಕ್ರಮವೇಣ ಮುಳುಗಲಾರಂಭಿಸಿದರು. ಯುವಕ ನೀರಿಗೆ ಧುಮುಕಿದಲ್ಲಿಂದಲೇ ಆತನ ತಂಗಿ ವಿಡಿಯೋ ಮಾಡುತ್ತಿದ್ದರು. ಅಣ್ಣ ಮುಳುಗುತ್ತಿದ್ದಾನೆ ಎಂಬುದು ಅವರಿಗೂ ಅವರಿವಾದಂತಿಲ್ಲ. ದುರದೃಷ್ಟವಶಾತ್, ನೋಡ ನೋಡುತ್ತಿದ್ದಂತೆಯೇ ಗೌತಮ್ ಗೌಡ ನೀರಲ್ಲಿ ಮುಳುಗಿ ಪ್ರಾಣ ಬಿಟ್ಟದ ದೃಶ್ಯ ವಿಡಿಯೋದಲ್ಲಿದೆ.

    Share Information
    Advertisement
    Click to comment

    You must be logged in to post a comment Login

    Leave a Reply