Connect with us

LATEST NEWS

ಕಟ್ಟೆ ಭೋಜಣ್ಣ ಆತ್ಮಹತ್ಯೆ ಪ್ರಕರಣ – ಮೊಳಹಳ್ಳಿ ಗಣೇಶ್ ಶೆಟ್ಟಿ ಅರೆಸ್ಟ್

ಉಡುಪಿ ಮೇ 28: ಚಿನ್ಮಯಿ ಆಸ್ಪತ್ರೆಯ ಮಾಲೀಕ ಕಟ್ಟೆ ಭೋಜಣ್ಣ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮೊಳಹಳ್ಳಿ ಗಣೇಶ್‌ ಶೆಟ್ಟಿ ಅವರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.


ಕಟ್ಟೆ ಭೋಜಣ್ಣ ಅವರು ಮೇ 26ರಂದು ಬೆಳಗ್ಗೆ ಮೊಳಹಳ್ಳಿ ಗಣೇಶ್‌ ಶೆಟ್ಟಿ ಅವರ ಮನೆಯಲ್ಲಿ ಪಿಸ್ತೂಲಿನಲ್ಲಿ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ಆತ್ಮಹತ್ಯೆಗೂ ಮುನ್ನ ಡೆತ್‌ನೋಟ್‌ ಬರೆದಿಟ್ಟಿದ್ದು, ಗಣೇಶ್‌ ಶೆಟ್ಟಿ ಹಾಗೂ ಹಂಗಳೂರು ಇಸ್ಮಾಯಿಲ್‌ ಅವರು ಚಿನ್ನಾಭರಣದ ಹೆಸರಿನಲ್ಲಿ ಬಡ್ಡಿ ಆಸೆ ತೋರಿಸಿ 3.34 ಕೋಟಿ ರೂ. ನಗದು, 5 ಕೆಜಿ ಚಿನ್ನ ಪಡೆದುಕೊಂಡಿದ್ದರು. ಬ್ಯಾಂಕಿನಲ್ಲಿಇದರ ಬಡ್ಡಿಅಸಲು ಸೇರಿ 9 ಕೋಟಿ ರೂ.ಗಳಾಗಿದ್ದು, ಇಬ್ಬರೂ ಕೂಡಾ ಹಣ, ಒಡವೆ ನೀಡದೆ ಮೋಸ ಮಾಡಿದ್ದಾರೆ. ಹಲವು ಬಾರಿ ಇದನ್ನು ಪಡೆದುಕೊಳ್ಳಲು ಪ್ರಯತ್ನಿಸಿದ್ದರೂ ಸಾಧ್ಯವಾಗದ ಕಾರಣ ನೊಂದು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ ಎಂದು ಉಲ್ಲೇಖಿಸಿದ್ದರು. ಡೆತ್‌ನೋಟ್‌ನಲ್ಲಿ ಉಲ್ಲೇಖಿಸಿದ ಹೆಸರಿನ ಆಧಾರದ ಮೇಲೆ ಇದೀಗ ಗಣೇಶ್‌ ಶೆಟ್ಟಿಯ ಬಂಧನವಾಗಿದೆ. ಇನ್ನೊಬ್ಬ ಆರೋಪಿ ಹಂಗಳೂರು ಇಸ್ಮಾಯಿಲ್‌ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.

ಬಂಧಿತ ಆರೋಪಿಯನ್ನು ಜೆಎಂಎಫ್‌ಸಿ ನ್ಯಾಯಾಧೀಶೆ ರೋಹಿಣಿ ಅವರ ನಿವಾಸದಲ್ಲಿ ಹಾಜರುಪಡಿಸಲಾಗಿದ್ದು, ಆತನಿಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *