Connect with us

LATEST NEWS

ಕಟೀಲು ಶ್ರೀದುರ್ಗಾಪರಮೇಶ್ವರಿಯ ಅವಹೇಳನ – ದೇವಿ ಸನ್ನಿದಿಯಲ್ಲಿ ಕಣ್ಣೀರಿಟ್ಟು ತಪ್ಪೊಪ್ಪಿಕೊಂಡ…!!

ಮಂಗಳೂರು ಜುಲೈ 15: ಕಟೀಲು ಶ್ರೀದುರ್ಗಾ ಪರಮೇಶ್ವರಿ ದೇವರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ ವ್ಯಕ್ತಿಯೊಬ್ಬ ಕೊನೆಗೆ ಪಶ್ಚಾತಾಪವಾಗಿ ದೇವಸ್ಥಾನಕ್ಕೆ ಬಂದು ತಪ್ಪೊಪ್ಪಿಕೊಂಡು ಕ್ಷಮೆಯಾಚಿಸಿದ ಘಟನೆ ನಡೆದಿದೆ.


ಮೂಲತಃ ಬಜ್ಪೆ ನಿವಾಸಿಯಾಗಿದ್ದು ಸದ್ಯ ಮುಂಬೈನಲ್ಲಿ ನೆಲೆಸಿರುವ ಆಲ್ಬರ್ಟ್ ಫೆರ್ನಾಂಡಿಸ್ ಅವರು ಕೆಲವು ದಿನಗಳ ಸಾಮಾಜಿಕ ಜಾಲತಾಣದಲ್ಲಿ ಕಟೀಲು ಶ್ರೀ ದುರ್ಗಾಪರಮೇಶ್ವರಿ ಅಮ್ಮನ ಬಗ್ಗೆ ಅಶ್ಲೀಲ ಪದ ಬಳಸಿ ದಿನೇಶ್‌ ಎಂಬುವವರಿಗೆ ವಾಯ್ಸ್‌ ಸಂದೇಶ ಕಳುಹಿಸಿದ್ದರು. ಈ ಆಡಿಯೋ ವೈರಲ್ ಆಗುತ್ತಿದ್ದಂತೆ ಈ ಬಗ್ಗೆ ಬಜ್ಪೆ ಠಾಣೆಯಲ್ಲಿ ದೂರು ಕೂಡ ದಾಖಲಾಗಿತ್ತು.

ಇದೀಗ ಈ ವ್ಯಕ್ತಿ ತಾನು ಮಾಡಿದ ತಪ್ಪು ಅರಿವಾಗಿ ಕಟೀಲಮ್ಮನ ಕ್ಷೇತ್ರಕ್ಕೆ ಬಂದು ತಾನು ಮಾಡಿದ ತಪ್ಪೆಂದು ಕಣ್ಣೀರಿಟ್ಟು ಕ್ಷಮೆಯಾಚಿಸಿ, ಜೈಲಿಗೆ ಹಾಕಬೇಡಿ ಎಂದು ಗೋಗರೆದು. ಜೊತೆಗೆ ಅವರ ವಯಸ್ಸಿಗೆ ಮರ್ಯಾದೆ ನೀಡಿ ಬಜ್ಪೆ ಠಾಣೆಗೆಯಲ್ಲಿ ಪರಸ್ಪರ ಪಂಚಾಯಿತಿಗೆಯಲ್ಲಿ ಇತ್ಯರ್ಥ ಗೊಳಿಸಲಾಯಿತು. ಈ ಸಂದರ್ಭದಲ್ಲಿ ಹಿಂದು ಸಂಘಟನೆಯ ಪ್ರಮುಖರು ಕಾರ್ಯಕರ್ತರು ಹಾಗೂ ಬಿಜೆಪಿ ನಾಯಕರು ಉಪಸ್ಥಿತರಿದ್ದರು.

Share Information
Continue Reading
Advertisement
Click to comment

Leave a Reply

Your email address will not be published. Required fields are marked *