Connect with us

DAKSHINA KANNADA

ನಿಮ್ಮಂತವರು ಆತ್ಮಹತ್ಯೆ ಮಾಡಿಕೊಳ್ಳುವ ಸನ್ನಿವೇಶ ಬರಬಹುದು – ಶಾಸಕ ಸುನಿಲ್ ಕುಮಾರ್

ನಿಮ್ಮಂತವರು ಆತ್ಮಹತ್ಯೆ ಮಾಡಿಕೊಳ್ಳುವ ಸನ್ನಿವೇಶ ಬರಬಹುದು – ಶಾಸಕ ಸುನಿಲ್ ಕುಮಾರ್

ಉಡುಪಿ ಸೆಪ್ಟೆಂಬರ್ 10: ಕೇಂದ್ರ ಸರಕಾರದ ನಿಲುವು ವಿರೋಧಿಸಿ ರಾಜೀನಾಮೆ ನೀಡಿರುವ ದಕ್ಷಿಣಕನ್ನಡ ಜಿಲ್ಲಾಧಿಕಾರಿಯಾಗಿದ್ದ ಸಸಿಕಾಂತ್ ಸೆಂಥಿಲ್ ವಿರುದ್ದ ಕಾರ್ಕಳ ಶಾಸಕ ಸುನಿಲ್ ಕುಮಾರ್ ಕಿಡಿಕಾರಿದ್ದಾರೆ. ಪ್ರಧಾನಿ ಮೋದಿ ನಿಲುವನ್ನು ವಿರೋಧಿಸಿ ರಾಜಿನಾಮೆ ಕೊಟ್ಟಿದ್ದೀರಿ,ಮುಂದೆ ನಿಮ್ಮಂತವರು ಆತ್ಮಹತ್ಯೆ ಯನ್ನೂ ಕೂಡ ಮಾಡಿಕೊಳ್ಳುವ ಸನ್ನಿವೇಶ ಬರಬಹುದು ಎಂದು ಕಿಡಿಕಾರಿದರು.

ಉಡುಪಿಯಲ್ಲಿ ನಡೆದ ಬಿಜೆಪಿ ನೂತನ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅಭಿನಂದನಾ ಸಭೆಯಲ್ಲಿ ಮಾತನಾಡಿದ ಅವರು ಕಾಶ್ಮೀರ, ರಾಮಮಂದಿರ ವಿಚಾರದಲ್ಲಿ ದಕ್ಷಿಣಕನ್ನಡ ಜಿಲ್ಲಾಧಿಕಾರಿಯಾಗಿದ್ದ ಸಸಿಕಾಂತ್ ಸೆಂಥಿಲ್ ಗೆ ಅಸಮಾಧಾನವಂತೆ. ಈ ಜಿಲ್ಲಾಧಿಕಾರಿ ಮತ್ತು ಅದೇ ಮಾನಸಿಕತೆ ಇರುವವರಿಗೆ ನಾವು ಎಚ್ಚರಿಕೆ ನೀಡುತ್ತಿದ್ದು, ಕೇವಲ 370 ನೇ ವಿಧಿ ಅಲ್ಲ, ಪಿಒಕೆ ಒಳಗೆ ಪ್ರವೇಶ ಮಾಡ್ತೇವೆ, ರಾಮಮಂದಿರವನ್ನೂ ಕಟ್ತೇವೆ ಎಂದು ಹೇಳಿದರು.

ಒಬ್ಬ ಜಿಲ್ಲಾಧಿಕಾರಿ ರಾಜಿನಾಮೆ ನೀಡಿದರೆ ನಮ್ಮ ನಿಲುವು ಬದಲಾಗಲ್ಲ, ಕಾಶ್ಮೀರದ ಕುರಿತಂತೆ, ರಾಮಮಂದಿರದ ಕುರಿತಂತೆ ನಮ್ಮ ಪಕ್ಷದ ನಿಲುವು ಯಾವುದೇ ಕಾರಣಕ್ಕೂ ಬದಲಾಗುವುದಿಲ್ಲ ಎಂದು ಹೇಳಿದರು.

Share Information
Continue Reading
Advertisement
Click to comment

Leave a Reply

Your email address will not be published. Required fields are marked *